Select Your Language

Notifications

webdunia
webdunia
webdunia
webdunia

ಮಳೆ ಇಫೆಕ್ಟ್: ಈ ಬಾರಿ ಕೇರಳದಲ್ಲಿ ಓಣಂಗೂ ಕತ್ತರಿ

ಮಳೆ ಇಫೆಕ್ಟ್: ಈ ಬಾರಿ ಕೇರಳದಲ್ಲಿ ಓಣಂಗೂ ಕತ್ತರಿ
ತಿರುವನಂತಪುರಂ , ಗುರುವಾರ, 16 ಆಗಸ್ಟ್ 2018 (08:26 IST)
ತಿರುವನಂತಪುರಂ: ವಿಪರೀತ ಮಳೆಯಿಂದಾಗಿ ತತ್ತರಿಸುವ ಕೇರಳದಲ್ಲಿ ಈ ಬಾರಿ ನಾಡಹಬ್ಬ ಓಣಂ ಆಚರಣೆ ಕಳೆಗುಂದಲಿದೆ.

ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಬೇಕಿದ್ದ ಓಣಂ ಆಚರಣೆ ಮಾಡದೇ ಇರಲು ಸಿಎಂ ಪಿಣರಾಯಿ ವಿಜಯನ್ ಸರ್ಕಾರ ತೀರ್ಮಾನಿಸಿದೆ. ಹಬ್ಬಕ್ಕಾಗಿ ಮೀಸಲಿರಿಸಲಾಗಿದ್ದ 30 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಪ್ರವಾಹ ಸಂತ್ರಸ್ತರಿಗೆ ಬಳಸಲು ತೀರ್ಮಾನಿಸಲಾಗಿದೆ.

ಆಗಸ್ಟ್ 25 ರಂದು ತಿರು ಓಣಂ ಹಬ್ಬವಿದೆ. ಆದರೆ ಇದುವರೆಗೆ ಕಂಡು ಕೇಳರಿಯದ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಹಬ್ಬದ ಸಂಭ್ರಮಾಚರಣೆ ಮಾಡುವ ಬದಲು ಸಂತ್ರಸ್ತರಿಗೆ ನೆರವಾಗಲು ಸರ್ಕಾರ ತೀರ್ಮಾನಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಮಳೆಗೆ ಕೊಚ್ಚಿ ವಿಮಾನ ನಿಲ್ದಾಣದ ಪಾಡು ಹೇಳ ತೀರದು!