Webdunia - Bharat's app for daily news and videos

Install App

ಬೆಂಗಳೂರಿನ ಗ್ರಾಹಕನಿಗೆ ಒನ್ ಪ್ಲಸ್ ಫೋನ್ ಕಂಪನಿ 5,000 ರೂ. ದಂಡ ತೆರಲು ಸೂಚನೆ: ಕಾರಣವೇನು ಗೊತ್ತಾ

Krishnaveni K
ಸೋಮವಾರ, 9 ಡಿಸೆಂಬರ್ 2024 (12:53 IST)
ಬೆಂಗಳೂರು: ಫೋನ್ ಖರೀದಿ ಮಾಡುವಾಗ ಯೂಸರ್ ಮ್ಯಾನ್ಯುವಲ್ ನೀಡಿಲ್ಲವೆಂಬ ಕಾರಣಕ್ಕೆ ಗ್ರಾಹಕನೊಬ್ಬ ದೂರು ನೀಡಿದ್ದಕ್ಕೆ ಈಗ ಒನ್ ಪ್ಲಸ್ ಕಂಪನಿ ದಂಡ ತೆರುವ ಪರಿಸ್ಥಿತಿಯಾಗಿದೆ.

ಹೊಸ ಮೊಬೈಲ್ ಫೋನ್ ತೆಗೆಯುವಾಗ ಸಾಮಾನ್ಯವಾಗಿ ಬಳಕೆ ಹೇಗೆ ಎಂಬ ಬಗ್ಗೆ ವಿವರಣೆ ನೀಡುವ ಗೈಡ್ ಒಂದನ್ನು ನೀಡಲಾಗುತ್ತದೆ. ಆದರೆ ಬೆಂಗಳೂರಿನ ಸಂಜಯ ನಗರ ನಿವಾಸಿ ಎಸ್ಎಂ ರಮೇಶ್ ಎಂಬವರಿಗೆ ಮೊಬೈಲ್ ಜೊತೆಗೆ ಯೂಸರ್ ಮ್ಯಾನ್ಯುವಲ್ ಸಿಕ್ಕಿರಲಿಲ್ಲ.

ಜೂನ್ ನಲ್ಲಿ ಅವರು ಒನ್ ಪ್ಲಸ್ ನಾರ್ಡ್ ಸಿಇ 3 ಮಾಡೆಲ್ ನ ಫೋನ್ ಖರೀದಿಸಿದ್ದರು. ಈ ಫೋನ್ ಗೆ 24, 598 ರೂ. ಬಿಲ್ ಕೂಡಾ ನೀಡಿದ್ದರು. ಆದರೆ ಅವರಿಗೆ ಇದುವರೆಗೆ ಯೂಸರ್ ಮ್ಯಾನ್ಯುವಲ್ ಸಿಕ್ಕಿರಲಿಲ್ಲ. ಇದರಿಂದಾಗಿ ಫೋನ್ ವ್ಯಾರಂಟಿ, ಬಳಕೆ ಹೇಗೆ ಎನ್ನುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ಫೋನ್ ಖರೀದಿಸಿ ನಾಲ್ಕು ತಿಂಗಳಾದ ಬಳಿಕ ಅವರು ಈ ಬಗ್ಗೆ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಇದು ಗ್ರಾಹಕ ಸೇವೆಯ ನಿರ್ಲ್ಯಕ್ಷತನದ ಪರಮಾವಧಿ ಎಂದು ಗ್ರಾಹಕ ನ್ಯಾಯಾಲಯ ಒನ್ ಪ್ಲಸ್ ಕಂಪನಿಗೆ 5,000 ರೂ.ಗಳ ದಂಡವನ್ನು ಗ್ರಾಹಕನಿಗೆ ತೆರಬೇಕು ಎಂದು ತೀರ್ಪು ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments