Webdunia - Bharat's app for daily news and videos

Install App

ಸಿಡಿಲಿನ ಬಗ್ಗೆ ಮಾಹಿತಿ ಬೇಕಾದ್ರೆ ಡೌನ್ ಲೋಡ್ ಮಾಡಿಕೊಳ್ಳಿ ಈ ಆ್ಯಪ್

Webdunia
ಶನಿವಾರ, 15 ಜೂನ್ 2019 (06:46 IST)
ಬೆಂಗಳೂರು : ಸಿಡಿಲಿನ ಬಡಿತಕ್ಕೆ ಜನರು ಬಲಿಯಾಗುವುದನ್ನು ತಡೆಯಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದ್ದು, ಸಿಡಿಲಿನ ಕುರಿತಾದ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಹೊಸ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ.




ಹೌದು. ಸಿಡಿಲು ಎಂಬ ಹೆಸರಿನ ಈ ಆ್ಯಪ್​ ನಿಂದ ನೀವು ಎಲ್ಲಿ ಯಾವಾಗ ಸಿಡಿಲು ಉಂಟಾಗಲಿದೆ ಎಂಬ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ಈ ಆ್ಯಪ್ ನಿಮ್ಮ ಲೊಕೇಶನ್ ಆಧಾರದ ಮೇಲೆ ಕೆಲಸ ಮಾಡಲಿದೆ. ಈ ಅಪ್ಲಿಕೇಶನ್ ​ನನ್ನು ಓಪನ್ ಮಾಡಿದರೆ ನಿಮಗೆ ಹವಾಮಾನದ ಮಾಹಿತಿ, ಎಲ್ಲಿ ಯಾವಾಗ ಸಿಡಿಲು ಬರಲಿದೆ,  ಮಳೆಯ ಸಾಧ್ಯತೆಯ ಕುರಿತಾದ ಸಂಪೂರ್ಣ ಮಾಹಿತಿ ಸಿಗಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಆಯ್ದ ಪ್ರದೇಶದಗಳಲ್ಲಿ ಸುಮಾರು 10 ಸೆನ್ಸಾರ್​ ಗಳನ್ನು ಅಳವಡಿಸಿದ್ದು, ಈ ಮೂಲಕ ನಿಮಗೆ ಮೊಬೈಲ್​ನಲ್ಲಿ ಈ ಬಗ್ಗೆ ಸೂಚನೆಗಳನ್ನು ನೀಡಲಿದೆ.


ಇಲ್ಲಿ ಕೆಂಪು, ಆರೆಂಜ್, ಹಳದಿ ಮತ್ತು ಹಸಿರು ಬಣ್ಣಗಳ ಸೂಚನೆಯ ಮೂಲಕ ಸಿಡಿಲಿನ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.  ನೀವಿರುವ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಬರಲಿದ್ದರೆ ಆ್ಯಪ್​ ನಲ್ಲಿ ಕೆಂಪು (ರೆಡ್) ​ ತೋರಿಸುತ್ತದೆ. ಹಾಗೆಯೇ 5 ಕಿ.ಮೀ ಒಳಗೆ ಸಿಡಿಲು ಕಾಣಿಸಿಕೊಳ್ಳುವಂತಿದ್ದರೆ ಆರೆಂಜ್ ಬಣ್ಣದಲ್ಲಿ ​ ಕಾಣಿಸುತ್ತದೆ. 15 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲಿನ ಬರುವ ಸಾಧ್ಯತೆಯನ್ನು ಹಳದಿ ಬಣ್ಣದಲ್ಲಿ ಸೂಚಿಸಲಾಗುತ್ತದೆ. ಹಾಗೆಯೇ ಹಸಿರ ಬಣ್ಣದಲ್ಲಿದ್ದರೆ ಸುರಕ್ಷಿತ ಎಂಬುದನ್ನು ತಿಳಿಸುತ್ತದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments