Webdunia - Bharat's app for daily news and videos

Install App

Arecanut price today: ಅಡಿಕೆ, ಕಾಳುಮೆಣಸಿಗೆ ಇಂದು ಹೆಚ್ಚಾಗಿದೆಯೇ ಇಲ್ಲಿದೆ ನೋಡಿ ವಿವರ

Krishnaveni K
ಶುಕ್ರವಾರ, 11 ಏಪ್ರಿಲ್ 2025 (12:38 IST)
ಬೆಂಗಳೂರು: ಬೆಲೆ ಏರಿಕೆಯಿಂದಾಗಿ ಅಡಿಕೆ ಬೆಳೆಗಾರರು ಖುಷಿಯಲ್ಲಿದ್ದರೆ, ಕಾಳುಮೆಣಸು ಬೆಲೆ ಇಳಿಕೆಯಿಂದ ಬೆಳೆಗಾರರು ನಿರಾಸೆಯಲ್ಲಿದ್ದರು. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಏರಿಕೆಯಾಗಿದೆಯೇ, ಇಂದಿನ ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇತ್ತು. ನಿನ್ನೆಯೂ ಕೆಲವು ವರ್ಗದ ಅಡಿಕೆ ದರ ಏರಿಕೆಯಾಗಿ ರೈತರ ಮೊಗದಲ್ಲಿ ಹರ್ಷ ತಂದಿತ್ತು. ಆದರೆ ಇಂದು ಅಡಿಕೆ ದರದಲ್ಲಿ ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎಂಬ ಸ್ಥಿತಿಯಿದೆ. ನಿನ್ನೆ ಹೊಸ ಅಡಿಕೆ ಬೆಲೆ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 485 ರೂ.ಗಳಷ್ಟಿತ್ತು. ಇಂದೂ ಕೂಡಾ ಅದೇ ದರ ಮುಂದುವರಿದಿದೆ. ಡಬಲ್ ಚೋಲ್ ಅಡಿಕೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ.

ಹೊಸ ಫಟೋರ ದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ, 320 ರೂ.ಗಳಷ್ಟೇ ಇದೆ. ಹಳೆ ಫಟೋರ ದರ 340 ರೂ. ಗಳಲ್ಲೇ ಇದೆ. ಹೊಸ ಉಳ್ಳಿ ದರ  ಏರಿಕೆಯಾಗಿ ಗರಿಷ್ಠ 200 ರೂ., ಹಳೆ ಉಳ್ಳಿ ದರವೂ 215 ಗಳಷ್ಟೇ ಇದೆ. ಹೊಸ ಕೋಕ ದರವೂ ಯಥಾಸ್ಥಿತಿಯಲ್ಲಿದ್ದು 280 ರೂ., ಹಳೇ ಕೋಕ 290 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ಎರಡು-ಮೂರು ದಿನಗಳಿಂದ ಸತ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಇಂದು ಕಾಳುಮೆಣಸು ದರವೂ ಯಥಾ ಸ್ಥಿತಿಯಲ್ಲಿದೆ. ನಿನ್ನೆ ಕಾಳುಮೆಣಸು ದರ ಗರಿಷ್ಠ 685 ರೂ.ಗೆ ಬಂದು ತಲುಪಿತ್ತು. ಇಂದೂ ಅದೇ ಬೆಲೆ ಮುಂದುವರಿದಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ತೆರಳುವ ಯೋಜನೆ ಹಾಕಿಕೊಂಡಿರುವವರು ಈ ಸುದ್ದಿ ಓದಲೇ ಬೇಕು

DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Bengaluru Stampede: ದೇಶದಲ್ಲಿ ನಡೆದ ದುರಂತಕ್ಕೆಲ್ಲ ಸಿಎಂ, ಪ್ರಧಾನಿ ರಾಜೀನಾಮೆ ನೀಡಿದ್ದಾರಾ: ಸಿಎಂ ಸಿದ್ದರಾಮಯ್ಯ

ಸಿಎಂ ರಾಜೀನಾಮೆ ಬದಲು ಜಾತಿಗಣತಿ, ಇದು ಹೈಕಮಾಂಡ್ ಪ್ಲ್ಯಾನ್: ಛಲವಾದಿ ನಾರಾಯಣಸ್ವಾಮಿ

Siddaramaiah: ರಾಜ್ಯಪಾಲರನ್ನು ಫೋನ್ ನಲ್ಲಿ ನಾನೇ ಕರೆದಿದ್ದೆ: ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಸ್ಪಷ್ಟನೆ

ಮುಂದಿನ ಸುದ್ದಿ
Show comments