Publish Date: Tue, 17 Apr 2018 (08:54 IST)
Updated Date: Tue, 17 Apr 2018 (15:55 IST)
ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಬೆನ್ನು ನೋವಿದ್ದರೂ ವೀರಾವೇಷದಿಂದ ಆಡಿ ಗೆಲುವಿನ ಹೊಸ್ತಿಲಲ್ಲಿ ಧೋನಿ ಜಾರಿ ಬಿದ್ದರು. ಬೆಸ್ಟ್ ಫಿನಿಶರ್ ಎಂದೇ ಹೆಸರು ಗಳಿಸಿರುವ ಧೋನಿಯನ್ನು ಕಟ್ಟಿ ಹಾಕಿದ್ದು ಹೇಗೆ ಗೊತ್ತಾ?
ಈ ಬಗ್ಗೆ ಕೆಎಲ್ ರಾಹುಲ್ ರಹಸ್ಯ ಬಹಿರಂಗಗೊಳಿಸಿದ್ದಾರೆ. ‘ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದರಿಂದ ಅವರಿಗೆ ಸತತವಾಗಿ ವೈಡ್ ಯಾರ್ಕರ್ ಬಾಲ್ ಎಸೆದವು. ಆದರೆ ಅವರು ಅದನ್ನೂ ಬಿಡಲಿಲ್ಲ. ಹಾಗಿದ್ದರೂ ಈ ಟೆಕ್ನಿಕ್ ನಿಂದಾಗಿ ಹೇಗೋ ರನ್ ನಿಯಂತ್ರಿಸಲು ಸಾಧ್ಯವಾಯಿತು. ಇದರಿಂದ ನಮ್ಮ ಬೌಲರ್ ಗಳೂ ಪಾಠ ಕಲಿತರು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ಇನ್ನು ತಮ್ಮ ತಂಡದ ಸಾಥಿ ಕ್ರಿಸ್ ಗೇಲ್ ಮರಳಿ ಫಾರ್ಮ್ ಗೆ ಬಂದಿರುವುದೂ ಎದುರಾಳಿಗಳಿಗೆ ಎಚ್ಚರಿಕೆಯ ಗಂಟೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.