Publish Date: Mon, 18 Mar 2019 (09:13 IST)
Updated Date: Mon, 18 Mar 2019 (09:15 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಬಲ ತಂಡವಾಗಿದ್ದರೂ ಇದುವರೆಗೆ ಒಂದೇ ಒಂದು ಐಪಿಎಲ್ ಚಾಂಪಿಯನ್ ಶಿಪ್ ಗೆಲ್ಲಲು ಸಾಧ್ಯವಾಗಿಲ್ಲ ಯಾಕೆ ಎಂಬುದಕ್ಕೆ ನಾಯಕ ವಿರಾಟ್ ಕೊಹ್ಲಿ ಕಾರಣ ಕೊಟ್ಟಿದ್ದಾರೆ.
ಆರಂಭದಿಂದ ಇಲ್ಲಿಯವರೆಗೆ ಆರ್ ಸಿಬಿ ಪರ ಎಷ್ಟೋ ಘಟಾನುಘಟಿ ಆಟಗಾರರು ಆಡಿದ್ದಾರೆ. ಆಟಗಾರರ ಆಯ್ಕೆಯಲ್ಲಿ ಆರ್ ಸಿಬಿ ಹಿಂದೆ ಬಿದ್ದಿಲ್ಲ. ಹಾಗಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಯಾಕೆ ಎಂಬುದಕ್ಕೆ ಕೊಹ್ಲಿ ಕಾರಣ ನೀಡಿದ್ದಾರೆ.
‘ನೀವು ತಪ್ಪು ನಿರ್ಧಾರ ತೆಗೆದುಕೊಂಡರೆ ಪಂದ್ಯ ಕಳೆದುಕೊಳ್ಳುತ್ತೀರಿ. ಇದುವರೆಗೆ ನಾವು ಪ್ರಮುಖ ಪಂದ್ಯಗಳಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಕ್ಕೇ ಪಂದ್ಯ ಸೋತೆವು. ಯಾವ ತಂಡ ಸಮತೋಲನದ ನಿರ್ಧಾರ ತೆಗೆದುಕೊಂಡು ಆಡಿದೆಯೋ ಅದು ಐಪಿಎಲ್ ಫೈನಲ್ ಗೆದ್ದಿದೆ’ ಎಂದು ಕೊಹ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ