Select Your Language

Notifications

webdunia
webdunia
webdunia
webdunia

ಕೆಕೆಆರ್ ವಿರುದ್ಧ ಸಿಡಿದೆದ್ದ ಸ್ಪಿನ್ನರ್ ಕುಲದೀಪ್ ಯಾದವ್

ಕೆಕೆಆರ್ ವಿರುದ್ಧ ಸಿಡಿದೆದ್ದ ಸ್ಪಿನ್ನರ್ ಕುಲದೀಪ್ ಯಾದವ್
ದುಬೈ , ಬುಧವಾರ, 15 ಸೆಪ್ಟಂಬರ್ 2021 (10:00 IST)
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ತಂಡದ ವ್ಯವಸ್ಥಾಪಕರ ವಿರುದ್ಧವೇ ಸಿಡಿದೆದ್ದಿದ್ದಾರೆ.


ಸಂದರ್ಶನವೊಂದರಲ್ಲಿ ಕುಲದೀಪ್ ಯಾದವ್ ತಮ್ಮ ತಂಡದ ವ್ಯವಸ್ಥೆ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಂವಹನ ಸರಿಯಾಗಿಲ್ಲ. ಸಾಮರ್ಥ್ಯವಿದ್ದರೂ ಅವಕಾಶವಿಲ್ಲ ಎಂದು ಕಿಡಿ ಕಾರಿದ್ದಾರೆ.

ಕೆಲವೊಮ್ಮೆ ತಾನು ಗೆಲುವು ತಂದುಕೊಡಬಲ್ಲೆ ಎಂದೆನಿಸಿದರೂ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ತಾನು ಆಡುತ್ತೇನೆಯೋ, ಇಲ್ಲವೋ ಎಂಬುದೇ ಗೊತ್ತಿಲ್ಲ. ವ್ಯವಸ್ಥಾಪಕರು ಎರಡು ತಿಂಗಳಿಗಾಗಿ ತಯಾರಿ ಮಾಡಿಕೊಂಡು ಬರುತ್ತಾರೆ. ಆಟಗಾರರ ನಿಜ ಸಾಮರ್ಥ್ಯದ ಬಗ್ಗೆ ಇವರಿಗೆ ಗೊತ್ತೇ ಇರುವುದಿಲ್ಲ. ವಿದೇಶೀ ಕೋಚ್ ಇದ್ದರಂತೂ ಮುಗಿಯಿತು. ಅವರೊಂದಿಗೆ ಸಂವಹನವೂ ಕಷ್ಟ.  ಈಗಿನ ಪರಿಸ್ಥಿತಿ ನೋಡಿದರೆ ನನ್ನ ಸಾಮರ್ಥ್ಯದ ಬಗ್ಗೆ ವ್ಯವಸ್ಥಾಪಕರಿಗೆ ನಂಬಿಕೆಯೇ ಇಲ್ಲ ಎನಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಅವರ ಈ ಆರೋಪಗಳಿಗೆ ಕೆಕೆಆರ್ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ರಾವಿಡ್ ಮಾಡಿದ್ದ ತಮಾಷೆ ನೆನೆಸಿಕೊಂಡ ದೀಪಕ್ ಚಹರ್