Publish Date: Mon, 26 Oct 2020 (09:41 IST)
Updated Date: Mon, 26 Oct 2020 (09:42 IST)
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪರ ಅದ್ಭುತ ದಾಳಿ ಸಂಘಟಿಸಿದ್ದ ಬೌಲರ್ ಮೊಹಮ್ಮದ್ ಸಿರಾಜ್ ತಮಗೆ ಧೋನಿ ನೀಡಿದ ಅಮೂಲ್ಯ ಸಲಹೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.
ಸಿರಾಜ್ ಸಾಕಷ್ಟು ಬಾರೀ ತಮ್ಮ ಪ್ರದರ್ಶನದ ಬಗ್ಗೆ ಟೀಕೆಗೊಳಗಾಗಿದ್ದಾರೆ. ಆಗೆಲ್ಲಾ ನೋವು ಅನುಭವಿಸಿದ್ದಿದೆ. ಆದರೆ ಸಿಎಸ್ ಕೆ ನಾಯಕ ಧೋನಿ ತಮಗೆ ನೀಡಿದ ಸಲಹೆಯೊಂದು ಸ್ಪೂರ್ತಿ ನೀಡಿತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಧೋನಿ ಹೇಳಿದ್ದೇನು ಗೊತ್ತಾ? ‘ಜನ ಏನು ಮಾತಾಡ್ತಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಡ. ಇಂದು ಒಂದು ದಿನ ಕೆಟ್ಟದಾಗಿ ಆಡಿದರೆ ಅವರು ನೀನು ಲಾಯಕ್ಕಿಲ್ಲ ಎನ್ನುತ್ತಾರೆ. ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದರೆ ನೀನು ಹುಚ್ಚನಾಗುವೆ. ಅದೇ ಜನ ನಾಳೆ ನೀನು ಒಳ್ಳೆಯ ಪ್ರದರ್ಶನ ನೀಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ನಿನ್ನ ಕೆಲಸದ ಬಗ್ಗೆ ಗಮನ ಕೊಡು ಎಂದಿದ್ದರು’ ಎಂದು ಸಿರಾಜ್ ಹೇಳಿದ್ದಾರೆ.