Publish Date: Sun, 01 Nov 2020 (09:43 IST)
Updated Date: Sun, 01 Nov 2020 (09:44 IST)
ದುಬೈ: ಕರ್ನಾಟಕ ರಾಜ್ಯೋತ್ಸವಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ವಿಡಿಯೋ ಸಂದೇಶ ಮೂಲಕ ಶುಭ ಹಾರೈಸಿದ್ದಾರೆ. ಅದೂ ಕನ್ನಡದಲ್ಲೇ ಎನ್ನುವುದು ವಿಶೇಷ.
ಆರ್ ಸಿಬಿ ತಂಡದಲ್ಲಿ ಕನ್ನಡಿಗರು ಬೆರಳಣಿಕೆಯಷ್ಟೇ ಕ್ರಿಕೆಟಿಗರು ಇರೋದು. ಆದರೆ ವಿರಾಟ್ ಕೊಹ್ಲಿ ಮತ್ತು ಹುಡುಗರು ಕನ್ನಡದಲ್ಲಿ ವಿಶ್ ಮಾಡುವುದನ್ನು ಮಾತ್ರ ಮರೆಯಲಿಲ್ಲ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಎಂದು ಪಕ್ಕಾ ಕನ್ನಡದಲ್ಲಿ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಮೊಹಮ್ಮದ್ ಸಿರಾಜ್, ದೇವದತ್ತ್ ಪಡಿಕ್ಕಲ್, ಉಮೇಶ್ ಯಾದವ್ ಸೇರಿದಂತೆ ಎಲ್ಲಾ ಕ್ರಿಕೆಟಿಗರೂ ಶುಭ ಹಾರೈಸಿದ್ದಾರೆ. ಇನ್ನು, ಆರ್ ಸಿಬಿ ಹುಡುಗರ ಈ ಕನ್ನಡದ ವಿಶ್ ಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.