Select Your Language

Notifications

webdunia
webdunia
webdunia
webdunia

ಪಾಂಟಿಂಗ್-ಕೊಹ್ಲಿ ನಡುವಿನ ವಾಗ್ವಾದದ ಕಾರಣ ವಿವರಿಸಿದ ರವಿಚಂದ್ರನ್ ಅಶ್ವಿನ್

ಪಾಂಟಿಂಗ್-ಕೊಹ್ಲಿ ನಡುವಿನ ವಾಗ್ವಾದದ ಕಾರಣ ವಿವರಿಸಿದ ರವಿಚಂದ್ರನ್ ಅಶ್ವಿನ್
ದುಬೈ , ಗುರುವಾರ, 12 ನವೆಂಬರ್ 2020 (11:50 IST)
ದುಬೈ: ಐಪಿಎಲ್ 13 ರ ಡೆಲ್ಲಿ-ಆರ್ ಸಿಬಿ ನಡುವಿನ ಪಂದ್ಯದಲ್ಲಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಮತ್ತು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಈ ವಾಗ್ವಾದದ ನಿಜ ಕಾರಣವನ್ನು ಇದೀಗ ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.


ಅಂದು ಅವರಿಬ್ಬರು ಮೈದಾನದಲ್ಲಿ ಕಿತ್ತಾಡಿಕೊಂಡಿದ್ದಕ್ಕೆ ಕಾರಣ ತಾವು ಎಂದು ಅಶ‍್ವಿನ್ ಹೇಳಿದ್ದಾರೆ. ‘ಬೌಲಿಂಗ್ ಮಾಡುವಾಗ ನನಗೆ ಅಸಾಧ‍್ಯ ಬೆನ್ನು ನೋವು ಕಾಡಿತ್ತು. ಹೀಗಾಗಿ ಪಂದ್ಯದ ನಡುವೆ ಹೊರಹೋಗಿದ್ದೆ. ಎಂಆರ್ ಐ ಸ್ಕ್ಯಾನ್ ಮಾಡಿದಾಗ ಬೆನ್ನಿನಲ್ಲಿ ನರ ಎಳೆದಂತಾಗಿದ್ದು ತಿಳಿದುಬಂತು. ನಾನು ಹೊರಹೋಗಿದ್ದನ್ನು ಆರ್ ಸಿಬಿ ನಾಯಕ ಪ್ರಶ್ನಿಸಿದ್ದರು. ನಿಮಗೇ ಗೊತ್ತಿರುವ ಹಾಗೆ, ರಿಕಿ ಪ್ರಶ್ನೆ ಮಾಡಿದಾಗ ಸುಮ್ಮನಿರುವ ಜನ ಅಲ್ಲ. ಹೀಗಾಗಿ ಆ ಬಿಸಿಯಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿತ್ತು ಅಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಏಕದಿನದಲ್ಲಿ ಟೀಂ ಇಂಡಿಯಾಕ್ಕೆ ರೆಟ್ರೋ ಜೆರ್ಸಿ