Webdunia - Bharat's app for daily news and videos

Install App

ಹಿಂದೂ ಸಂತರೆಲ್ಲಾ ಗೋಮಾಂಸ, ಮಟನ್ ಭಕ್ಷಕರು: ಝಾಕಿರ್ ನಾಯ್ಕ್

Krishnaveni K
ಶುಕ್ರವಾರ, 4 ಅಕ್ಟೋಬರ್ 2024 (10:41 IST)
ಇಸ್ಲಾಮಾಬಾದ್: ಹಿಂದೂ ಸಾಧು ಸಂತರೆಲ್ಲಾ ಗೋಮಾಂಸ, ಮಟನ ನಂತಹ ಮಾಂಸಾಹಾರ ಭಕ್ಷಕರೇ ಎಂದು ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ವಿವಾದಿತ ಹೇಳಿಕೆ ನೀಡಿದ್ದಾನೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಝಾಕಿರ್ ನಾಯ್ಕ್ ಇಂತಹದ್ದೊಂದು ಹೇಳಿಕೆ ನೀಡಿದ್ದಾನೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆತ ಹಿಂದೂ ಧರ್ಮದ ಸಾಧು ಸಂತರೆಲ್ಲಾ ಗೋಮಾಂಸ ಭಕ್ಷಕರು. ಅವರು ಮಟನ್ ಕೂಡಾ ತಿನ್ನುತ್ತಾರೆ. ಗೋಮಾಂಸ ನಿಷೇಧ ಎನ್ನುವುದು ಕೇವಲ ರಾಜಕೀಯಕ್ಕಷ್ಟೇ ಎಂದಿದ್ದಾನೆ.

ಮಹಿಳೆಯರಿಗೆ ಕಿರುಕುಳ ನೀಡಿದರೆ ಕೇವಲ 3 ವರ್ಷ ಶಿಕ್ಷೆಯಷ್ಟೇ. ಆದರೆ ಗೋಮಾಂಸ ಸೇವಿಸಿದರೆ ಭಾರತದಲ್ಲಿ 5 ವರ್ಷ ಕಠಿಣ ಶಿಕ್ಷೆ ನೀಡಲಾಗುತ್ತದೆ. ಇದು ಯಾವ ಸೀಮೆ ನ್ಯಾಯ ಎಂದು ಝಾಕಿರ್ ನಾಯ್ಕ್ ನಾಲಿಗೆ ಹರಿಬಿಟ್ಟಿದ್ದಾನೆ. ಈತನ ಭಾಷಣ ಈಗ ವಿವಾದಕ್ಕೆ ಕಾರಣವಾಗಿದೆ.

ನಿನ್ನೆಯಷ್ಟೇ ಕರ್ನಾಟಕ ಸರ್ಕಾರದ ಸಚಿವ ದಿನೇಶ್ ಗುಂಡೂರಾವ್ ಹಿಂದೂ ಕ್ರಾಂತಿಕಾರಿ ನಾಯಕ ವೀರ ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು ಎಂದು ವಿವಾದ ಸೃಷ್ಟಿಸಿದ್ದರು. ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಝಾಕಿರ್ ನಾಯ್ಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಇಡೀ ಹಿಂದೂ ಸಂತರೆಲ್ಲರೂ ಗೋಮಾಂಸ ಭಕ್ಷಕರು ಎಂದಿದ್ದಾನೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ಬಿಗ್ ಸರ್ಪ್ರೈಸ್‌: ಮಹಾರಾಷ್ಟ್ರ ಸಿಎಂರಿಂದ ದೊಡ್ಟಮೊತ್ತದ ಬಹುಮಾನ

ಇಯರ್‌ಫೋನ್ ಧರಿಸಿ ರೈಲು ಹಳಿ ದಾಟುತ್ತಿದ್ದ ಬಾಲಕ ರೈಲು ಡಿಕ್ಕಿ ಹೊಡೆದು ಸಾವು

ಕೋರ್ಟ್ ನಲ್ಲಿ ಕಣ್ಣೀರಿಡುತ್ತಾ ಪ್ರಜ್ವಲ್ ರೇವಣ್ಣ ಹೇಳಿದ್ದೇನು, ಸಂಪೂರ್ಣ ವಿವರ ಇಲ್ಲಿದೆ

ರಾಹುಲ್ ಗಾಂಧಿ ಮತಗಳವು ಪ್ರತಿಭಟನೆಗೆ ಬೆಂಗಳೂರಿನಲ್ಲಿ ಮರಗಳಿಗೆ ಕತ್ತರಿ

ಧರ್ಮಸ್ಥಳ ಕೇಸ್ ಗೆ ಇಂದು ಮಹತ್ವದ ತಿರುವು ಗ್ಯಾರಂಟಿ

ಮುಂದಿನ ಸುದ್ದಿ
Show comments