Select Your Language

Notifications

webdunia
webdunia
webdunia
webdunia

Shahbaz Sharif: ರಾತ್ರಿ 2.30 ಕ್ಕೆ ಕಾಲ್ ಬಂತು: ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ ಷರೀಫ್

Pakistan PM Sharif

Krishnaveni K

ಇಸ್ಲಾಮಾಬಾದ್ , ಶನಿವಾರ, 17 ಮೇ 2025 (12:14 IST)
ಇಸ್ಲಾಮಾಬಾದ್: ಆಪರೇಷನ್ ಸಿಂಧೂರ್ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ಇದನ್ನು ಪಾಕಿಸ್ತಾನ ಇದುವರೆಗೆ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಪ್ರಧಾನಿ ಷರೀಫ್ ಅವರಿಂದಲೇ ಸತ್ಯ ಹೊರಬಂದಿದೆ.

ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಮುಟ್ಟಿಕೊಳ್ಳುವಂತೆ ದಾಳಿ ಮಾಡಿತು. ಪಾಕಿಸ್ತಾನದ ಪ್ರಮುಖ ವಾಯನೆಲೆಗಳ ಮೇಲೆಯೇ ಬಾಂಬ್ ಹಾಕಿ ಹಾನಿ ಮಾಡಿದೆ.

ಆದರೆ ಇದನ್ನು ಪಾಕಿಸ್ತಾನ ಇದುವರೆಗೆ ಬಹರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಪ್ರಮುಖ ವಾಯನೆಲೆ ನೂರ್ ಖಾನ್ ಏರ್ ಬೇಸ್ ಗೆ ಭಾರತ ಬಾಂಬ್ ಹಾಕಿದ್ದು ನಿಜ ಎಂದು ಷರೀಫ್ ಹೇಳಿದ್ದಾರೆ.

ರಾತ್ರಿ 2.30 ರ ವೇಳೆಗೆ ಸೇನಾ ಮುಖ್ಯಸ್ಥ ಆಸಿಫ್ ನೂರ್ ಕರೆ ಮಾಡಿದರು. ಹಿಂದೂಸ್ತಾನ್ ನ ಮಿಸೈಲ್ ಗಳು ನೂರ್ ಖಾನ್ ಏರ್ ಬೇಸ್ ಗೆ ದಾಳಿ ಮಾಡಿದೆ ಎಂದರು’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ನೂರ್ ಖಾನ್ ಏರ್ ಬೇಸ್ ಮೇಲೆ ದಾಳಿಯಾಗಿರುವುದು ಖಚಿತವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Bengaluru Mangaluru Rail: ಬೆಂಗಳೂರು, ಮಂಗಳೂರು ರೈಲ್ವೇ ಪ್ರಯಾಣಿಕರ ಗಮನಕ್ಕೆ: ರೈಲುಗಳು ಕ್ಯಾನ್ಸಲ್