Webdunia - Bharat's app for daily news and videos

Install App

ರಷ್ಯಾ ದಾಳಿಗೆ ಕೀವ್ ನಗರ ತತ್ತರ!

Webdunia
ಸೋಮವಾರ, 7 ಮಾರ್ಚ್ 2022 (07:30 IST)
ಕೀವ್ : ಉಕ್ರೇನ್ ಮೇಲೆ ರಣರಕ್ಕಸ ಸ್ವರೂಪದಲ್ಲಿ ಸತತ 11ನೇ ದಿನವೂ ರಷ್ಯಾ ಸೇನಾ ಮುಗಿಬಿದ್ದಿದೆ.
ಹಗಲು ರಾತ್ರಿ ಎನ್ನದೇ, ಉಸಿರಾಡಲು ಸ್ವಲ್ಪವೂ ಬಿಡದಂತೆ ಬಾಂಬ್ಗಳ ಸುರಿಮಳೆಗೈಯ್ಯುತ್ತಿದೆ. ಕೀವ್ ನಗರ ತತ್ತರಿಸಿ ಹೋಗಿದೆ. ಈಗಾಗಲೇ ಖೇರ್ಸಾನ್ ನಗರ ವಶಪಡಿಸಿಕೊಂಡಿರುವ ರಷ್ಯಾ ಪಡೆಗಳು ಖಾರ್ಕಿವ್ ಮೇಲೆ ಪಟ್ಟು ಸಾಧಿಸಲು ನೈಟ್ ಆಪರೇಷನ್ ಕೈಗೊಂಡಿದೆ.

ನೂರಾರು ಕ್ಷಿಪಣಿಗಳನ್ನು ಹಾರಿಸಿ ಭಾರೀ ಸಾವು ನೋವಿಗೆ ಕಾರಣವಾಗಿದೆ. ಸುಮಿ, ಮರಿಯುಪೋಲ್, ವೋಲ್ನೋವ್ಖಾ ನಗರಗಳಿಗೆ ಮುತ್ತಿಗೆ ಹಾಕಿದೆ. ಕೀವ್, ಬುಚಾ ನಗರಗಳಲ್ಲಿ ಜನವಸತಿ, ಸೇನೆಯ ವೈಮಾನಿಕ ನೆಲೆಗಳ ಮೇಲೆ ಶೆಲ್, ಮಿಸೈಲ್ ಟ್ಯಾಕ್ ಮಾಡಿದೆ. ಉಕ್ರೇನ್ನ ಛಾಶ್ಚಿಯಾ ನಗರವನ್ನು ಹಿಡಿತಕ್ಕೆ ತೆಗೆದುಕೊಂಡಿರೋದಾಗಿ ರಷ್ಯಾ ಘೋಷಿಸಿದೆ.

ಸ್ಮಶಾನದಂತೆ ಆಗಿರುವ ಕೀವ್ ನಗರದ ಡ್ರೋನ್ ವಿಡೀಯೋ ರಿಲೀಸ್ ಮಾಡಿದೆ. ಈಗಾಗಲೇ ಎರಡು ರಿಯಾಕ್ಟರ್ ವಶಕ್ಕೆ ಪಡೆದಿರುವ ರಷ್ಯಾ ಪಡೆಗಳು ಈಗ ಮೂರನೇ ರಿಯಾಕ್ಟರ್ ಯೂಜ್ನೌಕ್ರೈನ್ಸ್ಕ್ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. 

ಝೈಟೋಮೀರ್ನ ಮೆಟ್ರೋ ಬಳಿ ಬಾಂಬ್ ಸ್ಫೋಟಗೊಂಡಿದೆ. ಒಡೆಸಾ ಉಡಾಯಿಸಲು ರಷ್ಯಾ ತಯಾರಿ ನಡೆಸಿದೆ. ಈ ಮಧ್ಯೆ, ಉಕ್ರೇನ್ ಸೇನೆಗಳು ಪ್ರತಿರೋಧ ತೋರುತ್ತಿವೆ. ರಷ್ಯಾದ ಸುಖೋಯ್ ಯುದ್ಧ ವಿಮಾನ, ಹೆಲಿಕಾಪ್ಟರ್, ಯುದ್ಧ ಟ್ಯಾಂಕ್ನ್ನು ಉಡೀಸ್ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Karnataka Rains: ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಅಬ್ಬರ ಶುರು

Chinnaswamy stampede: ಸಿಎಂ ಕಚೇರಿಯಿಂದಲೇ ಪೊಲೀಸರಿಗೆ ಒತ್ತಡ ಬಂದಿತ್ತು, ಶಾಕಿಂಗ್ ಸತ್ಯ ರಿವೀಲ್

ಮುಂದಿನ ಸುದ್ದಿ
Show comments