Webdunia - Bharat's app for daily news and videos

Install App

Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ

Krishnaveni K
ಗುರುವಾರ, 1 ಮೇ 2025 (20:56 IST)
Photo Credit: X
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ತನ್ನ ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿದ್ದು ತಕ್ಷಣವೇ ದೇಶ ಬಿಡುವಂತೆ ತಾಕೀತು ಮಾಡಿತ್ತು. ಆದರೆ ಅತ್ತ ಪಾಕಿಸ್ತಾನ ತನ್ನ ಪ್ರಜೆಗಳಿಗೇ ನೀವೇನೂ ಇಲ್ಲಿ ಬರೋದು ಬೇಡ ಎಂಬಂತೆ ಬಾಗಿಲು ಹಾಕಿ ಕೂತಿದೆ.

ಭಾರತದಲ್ಲಿರುವ ಎಷ್ಟೋ ಪಾಕಿಸ್ತಾನಿ ನಾಗರಿಕರು ಗಂಟು ಮೂಟೆ ಕಟ್ಟಿಕೊಂಡು ತಮ್ಮ ದೇಶಕ್ಕೆ ತೆರಳಲು ವಾಘಾ-ಅಟ್ಟಾರಿ ಗಡಿ ಬಳಿ ಬಂದಿದ್ದಾರೆ. ಆದರೆ ಭಾರತದಿಂದ ಬಂದಿರುವ ತನ್ನ ಪ್ರಜೆಗಳನ್ನೇ ಪಾಕಿಸ್ತಾನ ಒಳಗೆ ಬಿಟ್ಟುಕೊಳ್ಳುತ್ತಿಲ್ಲ.

ಹೀಗಾಗಿ ಈಗ ಭಾರತ ಬಿಟ್ಟ ಪಾಕಿಸ್ತಾನ ಪ್ರಜೆಗಳು ಅಟ್ಟಾರಿ ಗಡಿಯಲ್ಲೇ ಸಿಲುಕಿಕೊಂಡಿದ್ದಾರೆ. ತಮ್ಮ ಬ್ಯಾಗ್ ಗಳ ಸಮೇತ ತಮ್ಮ ದೇಶದ ಬಾಗಿಲು ತೆರೆಯುತ್ತಾ ಎಂದು ಕಾದು ಕುಳಿತಿದ್ದಾರೆ.

ಗಡಿ ಬಾಗಿಲು ತೆರೆಯುತ್ತದೆ ಎಂದು ಬೆಳ್ಳಂ ಬೆಳಿಗ್ಗೆಯಿಂದಲೇ ಕಾದು ಕುಳಿತಿದ್ದ ಪಾಕ್ ನಾಗರಿಕರಿಗೆ ನಿರಾಸೆಯಾಗಿದೆ. ಮಧ್ಯಾಹ್ನವಾದರೂ ತೆರೆಯದೇ ಇದ್ದಾಗ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಭಾರತದಿಂದ ಬಂದಿರುವವರನ್ನು ಸ್ವಿಕರಿಸಬಾರದು ಎಂದು ಪಾಕ್ ಅಧಿಕಾರಿಗಳೇ ಸೂಚಿಸಿದ್ದಾರಂತೆ. ಹೀಗಾಗಿ ಈಗ ಭಾರತದಿಂದ ತೆರಳಿರುವ ಪಾಕ್ ನಾಗರಿಕರ ಸ್ಥಿತಿ ಅತಂತ್ರವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿ ಒತ್ತಾಯಕ್ಕೆ ಮಣಿದು ಕೇಂದ್ರದಿಂದ ಜಾತಿಗಣತಿ: ಡಿಕೆ ಶಿವಕುಮಾರ್‌

ಪಾಕಿಸ್ತಾನದ ಜೊತೆ ಮಾತುಕತೆ ಮಾಡಿ ಎಂದ ಅಮೆರಿಕಾಗೆ ಒಂದೇ ಮಾತಲ್ಲಿ ಉತ್ತರ ಕೊಟ್ಟ ಸಚಿವ ಎಸ್ ಜೈಶಂಕರ್

ಮುಂದಿನ ಸುದ್ದಿ
Show comments