Webdunia - Bharat's app for daily news and videos

Install App

ಭಾರತಕ್ಕೆ ಟ್ರಂಪ್ ಸುಂಕ: ಮೋದಿ ಬೆಂಬಲಿಸಿದ್ದಕ್ಕೆ ಸರಿಯಾಗಿಯೇ ಮಾಡಿದ್ರು ಎಂದ ನೆಟ್ಟಿಗರು

Krishnaveni K
ಗುರುವಾರ, 7 ಆಗಸ್ಟ್ 2025 (09:05 IST)
ನ್ಯೂಯಾರ್ಕ್: ತನ್ನ ಮಾತು ಕೇಳದ ಹೊಟ್ಟೆಉರಿಗೆ ಭಾರತದ ಮೇಲೆ ಶೇ.50 ರಷ್ಟು ಟಾರಿಫ್ ವಿಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಮೋದಿ ಬೆಂಬಲಿಸಿದ್ದಕ್ಕೆ ಸರಿಯಾಗಿಯೇ ಮಾಡಿದ್ರು ಎಂದಿದ್ದಾರೆ.

ಈ ಹಿಂದೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಭಾರತೀಯರು ಟ್ರಂಪ್ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಆಶಿಸಿದ್ದರು. ಇದಕ್ಕೆ ಕಾರಣ ಮೊದಲನೆಯ ಅವಧಿಯಲ್ಲಿ ಟ್ರಂಪ್ ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ ಮತ್ತು ಭಾರತದ ಜೊತೆಗಿದ್ದ ಉತ್ತಮ ಬಾಂಧವ್ಯ.

ಮೊದಲನೆಯ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ ಟ್ರಂಪ್ ಭಾರತ ಪ್ರವಾಸ ಮಾಡಿದ್ದರು. ಈ ವೇಳೆ ಅಹಮ್ಮದಾಬಾದ್ ಮೈದಾನದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೋದಿ ಮತ್ತು ಟ್ರಂಪ್ ಪರಸ್ಪರ ಆಲಂಗಿಸಿಕೊಂಡಿದ್ದರು. ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದು ಟ್ರಂಪ್ ಹೊಗಳಿದ್ದರು. ಅಮೆರಿಕಾಗೆ ತೆರಳಿದ್ದ ಮೋದಿಗೂ ಟ್ರಂಪ್ ಅಂತಹದ್ದೇ ಭವ್ಯ ಸ್ವಾಗತ ನೀಡಿದ್ದರು. ಭಾರತ ನನ್ನ ಸ್ನೇಹಿತ ರಾಷ್ಟ್ರ ಎಂದಿದ್ದರು.

ಈ ಬಾರಿ ಅಧ್ಯಕ್ಷೀಯ ಚುನಾವಣೆ ವೇಳೆಯೂ ಭಾರತ ತನ್ನ ಮಿತ್ರ ರಾಷ್ಟ್ರ, ಮೋದಿ ನನ್ನ ಸ್ನೇಹಿತ ಎಂದೇ ಟ್ರಂಪ್ ಪಠಿಸುತ್ತಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಭಾರತದ ವಿರುದ್ಧ ಕೆಂಡ ಕಾರಲು ಶುರು ಮಾಡಿದ್ದಾರೆ. ರಷ್ಯಾ ಜೊತೆಗೆ ಭಾರತದ ಸ್ನೇಹ ಟ್ರಂಪ್ ನಿದ್ದೆಗೆಡಿಸಿದೆ. ಹೀಗಾಗಿ ಭಾರತಕ್ಕೇ ಗುನ್ನಾ ಇಡುತ್ತಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮೋದಿ ಅಬ್ ಕೀ ಬಾರ್ ಟ್ರಂಪ್ ಕೀ ಸರ್ಕಾರ್ ಎಂದಿದ್ದೇ ಬಂತು. ಟ್ರಂಪ್ ಮಾತ್ರ ಭಾರತಕ್ಕೇ ಚೂರಿ ಹಾಕಿದರು ಎನ್ನುತ್ತಿದ್ದಾರೆ. ತನ್ನ ಮಾತು ಕೇಳದವರ ವಿರುದ್ಧ ಎಲ್ಲಾ ಅಮೆರಿಕಾ ಈ ರೀತಿ ಸುಂಕ ಹೆಚ್ಚು ಮಾಡುತ್ತಿದ್ದರೆ ಮುಂದೆ ಅಮೆರಿಕಾವೇ ಏಕಾಂಗಿಯಾಗಬೇಕಾದೀತು. ಉಳಿದೆಲ್ಲಾ ರಾಷ್ಟ್ರಗಳು ಅಮೆರಿಕಾ ವಿರುದ್ಧ ತಿರುಗಿಬೀಳಬಹುದು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ಮೇಲೆ 50 ಶೇಕಡಾ ಸುಂಕದ ಬರೆ ಹಾಕಿದ ಡೊನಾಲ್ಡ್ ಟ್ರಂಪ್

ಭುವನೇಶ್ವರ: ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌: ಹೆದರಿ ಪೆಟ್ರೋಲ್ ಹಚ್ಚಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೆಲ್ಮೆಟ್ ಇಲ್ಲದೆ, ಪೆಟ್ರೋಲ್ ಇಲ್ಲ: ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ಸವಾರ ಮಾಡಿದ ಕಸರತ್ತು ವೈರಲ್

ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಡೀರ್ ಭೇಟಿ ಹಿಂದಿನ ಕಾರಣ ಇಲ್ಲಿದೆ

ಧರ್ಮಸ್ಥಳ: ನಿರ್ಣಾಯಕ ಘಟಕ್ಕೆ ತಲುಪುತ್ತಿರುವಾಗಲೇ ಮತ್ತೊಬ್ಬ ಅಪರಿಚಿತ ಎಂಟ್ರಿ

ಮುಂದಿನ ಸುದ್ದಿ
Show comments