Select Your Language

Notifications

webdunia
webdunia
webdunia
webdunia

ಭಾರತ ಮೂಲದ ಮೂವರು ನೀರುಪಾಲು

ಭಾರತ ಮೂಲದ ಮೂವರು ನೀರುಪಾಲು
ವಾಷಿಂಗ್ಟನ್ , ಬುಧವಾರ, 28 ಡಿಸೆಂಬರ್ 2022 (14:50 IST)
ವಾಷಿಂಗ್ಟನ್ : ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಜುಗಡ್ಡೆ ಕುಸಿದು ಮಹಿಳೆ ಸೇರಿದಂತೆ ಭಾರತ ಮೂಲದ ಮೂವರು ಸಾವನ್ನಪ್ಪಿದ ಘಟನೆ ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನಡೆದಿದೆ.

ಅರಿಜೋನಾದ ಕೊಕೊನಿನೊ ಕೌಂಟಿಯಲ್ಲಿರುವ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ನಾರಾಯಣ ಮುದ್ದಣ (49) ಗೋಕುಲ್ ಮೆಡಿಸೆಟಿ (47) ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಈ ಮೂವರು ಮೂಲತಃ ಭಾರತದವರಾಗಿದ್ದು, ಅಮೆರಿಕದ ಅರಿಜೋನಾದ ಚಾಂಡ್ಲರ್ನಲ್ಲಿ ನೆಲೆಸಿದ್ದರು.

ಈ ಮೂವರು ನೀರಿನಲ್ಲಿ ಮುಳುಗಿದ್ದನ್ನು ನೋಡಿದ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಿತಾಳನ್ನು ನೀರಿನಿಂದ ಹೊರತೆಗೆದಿದ್ದಾರೆ.

ಆದರೆ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ಇನ್ನೂ ನಾರಾಯಣ ಹಾಗೂ ಗೋಕುಲ್ ಅವರಿಗಾಗಿ ಮಧ್ಯಾಹ್ನದವರೆಗೆ ಹುಡುಕಾಟ ನಡೆಸಿದ್ದು, ಅವರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ!