Select Your Language

Notifications

webdunia
webdunia
webdunia
webdunia

ಭಾರತ-ಚೀನಾ ಸಂಘರ್ಷ ಸದ್ಯಕ್ಕೆ ಮುಗಿಯದ ಕತೆ

ಭಾರತ-ಚೀನಾ ಸಂಘರ್ಷ ಸದ್ಯಕ್ಕೆ ಮುಗಿಯದ ಕತೆ
ನವದೆಹಲಿ , ಗುರುವಾರ, 2 ಜುಲೈ 2020 (09:19 IST)
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣ ತೋರುತ್ತಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದರೂ ಉಭಯ ದೇಶಗಳು ಗಡಿಯಲ್ಲಿ ಸೇನೆ ಜಮಾವಣೆ ಹೆಚ್ಚಿಸುತ್ತಲೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ.


ಲಡಾಖ್ ಭಾಗದಲ್ಲಿ ಚೀನಾ ಹೆಚ್ಚುವರಿಯಾಗಿ 10 ಸಾವಿರ ಸೈನಿಕರನ್ನು ನೇಮಿಸಿದೆ. ಹೀಗಾಗಿ ಭಾರತವೂ ಕಟ್ಟೆಚ್ಚರ ವಹಿಸಿದ್ದು, ಗಡಿಯಲ್ಲಿ ಸೇನೆ ಸನ್ನದ್ಧವಾಗಿರಿಸಿದೆ.

ಇದಲ್ಲದೆ, ಮೊನ್ನೆ ಸಂಘರ್ಷ ನಡೆದ ಗಲ್ವಾನ್ ಕಣಿವೆಗೆ ಭಾರತೀಯ ಸೇನೆ ಹೊಸ ಕಮಾಂಡಿಂಗ್ ಅಧಿಕಾರಿಯನ್ನು ನೇಮಿಸಿದೆ. ಮೊನ್ನೆ ನಡೆದಿದ್ದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ವಿಶ್ವನಾಥ್ ಎಂಎಲ್ ಸಿ ಆಗೋದು ಪಕ್ಕಾ ಎಂದ ಸಚಿವ