Select Your Language

Notifications

webdunia
webdunia
webdunia
webdunia

ಭಾರತ, ನೇಪಾಳ ಬಳಿಕ ಈಗ ಭೂತಾನ್ ಕಡೆಗೆ ಚೀನಾ ವಕ್ರದೃಷ್ಟಿ

ಭಾರತ, ನೇಪಾಳ ಬಳಿಕ ಈಗ ಭೂತಾನ್ ಕಡೆಗೆ ಚೀನಾ ವಕ್ರದೃಷ್ಟಿ
ನವದೆಹಲಿ , ಬುಧವಾರ, 1 ಜುಲೈ 2020 (09:13 IST)
ನವದೆಹಲಿ: ಭಾರತ ಮತ್ತು ನೇಪಾಳ ಜತೆಗೆ ಗಡಿ ತಂಟೆ ಮಾಡಿಕೊಂಡಿರುವ ಚೀನಾ ಇದೀಗ ಮತ್ತೊಂದು ನೆರೆಯ ರಾಷ್ಟ್ರ ಭೂತಾನ್ ಕಡೆಗೆ ವಕ್ರದೃಷ್ಟಿ ಬೀರಿದೆ.


ಭಾರತದ ಸೈನಿಕರ ಜತೆಗೆ ಗುದ್ದಾಟ ನಡೆಸಿದ ಚೀನಾ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಮತ್ತೊಂದೆಡೆ ಅವರ ಭೂಭಾಗವನ್ನು ಉಪಾಯವಾಗಿ ನುಂಗಿ ಹಾಕಿತ್ತು.

ಇದೀಗ ಭೂತಾನ್ ವಿರುದ್ಧ ಕೆಂಗಣ್ಣು ಬೀರಿದೆ. ಭಾರತ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪುಟ್ಟ ರಾಷ್ಟ್ರ ಭೂತಾನದ ಪೂರ್ವಭಾಗದಲ್ಲಿರುವ ತ್ರಾಶಿಗಂಗ್ ನಲ್ಲಿ ಅಲ್ಲಿನ ಸರ್ಕಾರ ಸಕ್ತೇಂಗ್ ವನ್ಯಜೀವಿ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದೆ. ಈ ಭೂಭಾಗ ವಿವಾದಿತ ಪ್ರದೇಶವಾಗಿದ್ದು, ಇಲ್ಲಿ ವನ್ಯಜೀವಿ ಕೇಂದ್ರ ನಿರ್ಮಾಣ ಮಾಡಬಾರದು ಎಂದು ಚೀನಾ ವಿರೋಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದ ಜಮೀರ್ ಅಹ್ಮದ್