Select Your Language

Notifications

webdunia
webdunia
webdunia
webdunia

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

Mohammed yunus

Krishnaveni K

ಢಾಕಾ , ಗುರುವಾರ, 12 ಜೂನ್ 2025 (10:46 IST)
Photo Credit: X
ಢಾಕಾ: ಆಂತರಿಕ ಕಚ್ಚಾಟಗಳಿಂದ ಬೆಂದು ಹೋಗಿದ್ದ ಬಾಂಗ್ಲಾದೇಶ ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ಭಾರತದ ಜೊತೆಗೇ ಯುದ್ಧ ಮಾಡಿ ತನ್ನ ಕುರ್ಚಿ ಉಳಿಸಿಕೊಳ್ಳಲು ಯತ್ನಿಸಿದ್ದರು ಎಂಬ ಅಂಶ ಬೆಳಕಿಗೆ ಬರುತ್ತಿದೆ.

ಭಾರತದ ಗಡಿಯಲ್ಲಿ ಘರ್ಷಣೆ ಮಾಡಿದರೆ ದೇಶದ ಗಮನ ಇತ್ತ ಸರಿಯುತ್ತದೆ. ಆಗ ಆಂತರಿಕ ಕಲಹಗಳಿಂದ ತಮ್ಮ ಸ್ಥಾನಕ್ಕೆ ಕುತ್ತು ಬರುವುದು ತಪ್ಪುತ್ತದೆ. ಬೇಗ ಚುನಾವಣೆ ನಡೆಸಿ ಎಂಬ ಬೇಡಿಕೆಯನ್ನೂ ತಣ್ಣಗಾಗಿಸಬಹುದು ಎಂದು ಯೂನಸ್ ಸಂಚು ರೂಪಿಸಿದ್ದರಂತೆ.

ಬಾಂಗ್ಲಾದೇಶದಲ್ಲಿ ತಮ್ಮ ಆಪ್ತ ನಾಯಕರ ಗುಂಪಿನ ಜೊತೆ ಚರ್ಚಿಸಿ ಮೊಹಮ್ಮದ್ ಯೂನಸ್ ಭಾರತದ ಜೊತೆಗೆ ಯುದ್ಧಕ್ಕೆ ಸಿದ್ಧತೆ ನಡೆಸಿದ್ದರು. ಭಾರತ ಆಪರೇಷನ್ ಸಿಂಧೂರ್ ನಡೆಸುತ್ತಿದ್ದಾಗಲೇ ಯೂನಸ್ ಕೂಡಾ ಭಾರತದ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು.

ಆದರೆ ಇಂತಹ ಕೃತ್ಯವೆಸಗಿದರೆ ಭಾರತ ಸುಮ್ಮನೇ ಕೂರದು. ಇದರಿಂದ ನಷ್ಟವಾಗುವುದು ಬಾಂಗ್ಲಾದೇಶಕ್ಕೇ ಎಂದು ಸೇನಾ ಮುಖ್ಯಸ್ಥ ವಕಾರ್ ಉಜ್ ಜಮಾನ್ ಸಲಹೆ ನೀಡಿದರು. ಹೀಗಾಗಿ ಬಾಂಗ್ಲಾದೇಶ ಈ ಯೋಜನೆಯನ್ನು ಕೈ ಬಿಟ್ಟಿತು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Siddaramaiah: ಇದೆಲ್ಲಾ ಚೆನ್ನಾಗಿರಲ್ಲ, ಆಂಧ್ರಪ್ರದೇಶ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ