Webdunia - Bharat's app for daily news and videos

Install App

ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ರತಿಕ್ರೀಡೆ ಮಾಡಿ ತಪ್ಪು ಮಾಡಿಬಿಟ್ಟೆ!

Webdunia
ಬುಧವಾರ, 27 ಮಾರ್ಚ್ 2019 (12:32 IST)
ಬೆಂಗಳೂರು: ಕೋಪದ ಕೈಯಲ್ಲಿ ಬುದ್ಧಿಕೊಟ್ಟರೆ ಎಂತಹಾ ಅನಾಹುತಗಳಾಗುತ್ತವೆ ಎಂಬುದಕ್ಕೆ ಇದೂ ಒಂದು ನಿದರ್ಶನ. ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ದೈಹಿಕ ಸಂಪರ್ಕ ಮಾಡಿ ಈಗ ಪಶ್ಚಾತ್ತಾಪ ಪಡುವ ಹೆಣ್ಣಿಗೆ ಏನು ಹೇಳೋದು?


ಪತಿ-ಪತ್ನಿಯರ ನಡುವಿನ ಹಾಸಿಗೆ ವಿಚಾರದ ಅಸಮಾಧಾನ ಜಗಳದಲ್ಲಿ ಅಂತ್ಯವಾಗಿ ಕೊನೆಗೆ ಗಂಡನ ಸ್ನೇಹಿತನ ಜತೆಗೇ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಕೋಪದ ಭರ ಇಳಿದ ಮೇಲೆ ಪಶ್ಚಾತ್ತಾಪ ಪಡುವ ಅದೆಷ್ಟೋ ಹೆಣ್ಣು ಮಕ್ಕಳಿದ್ದಾರೆ.

ಮೊದಲನೆಯದಾಗಿ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಬೇಕು ಎಂಬುದು ಮೊದಲನೆಯ ಪಾಠ. ಎರಡನೆಯದಾಗಿ ತಪ್ಪು ಮಾಡಿದ ಮೇಲೆ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕು. ನೀವು ಮಾಡಿದ ತಪ್ಪಿನ ಬಗ್ಗೆ ಗಂಡನ ಜತೆ ಹೇಳಿಕೊಂಡಲ್ಲಿ ಪರಿಹಾರ ಸಿಗುತ್ತದೆ ಎಂದಾದರೆ ಹೇಳಿಕೊಂಡರೆ ತಪ್ಪಿಲ್ಲ. ಆದರೆ ಸಮಾಧಾನ ಸಿಗುವ ಬದಲು ಮತ್ತಷ್ಟು ನಿಮ್ಮ ಸಂಬಂಧ ಹಾಳಾಗುತ್ತದೆ ಎಂದಾದರೆ ಹೇಳಿಕೊಳ್ಳದೇ ಅದನ್ನು ಮರೆತು ಇನ್ನಾದರೂ ವಿಧೇಯ ಪತ್ನಿಯಾಗಿ ಬದುಕುವುದು ಉತ್ತಮ.

ಆದರೂ ಮಾಡಿದ ತಪ್ಪು ಕಾಡುತ್ತದೆ ಎಂದಾದರೆ ಕ್ಷಮೆ ಕೇಳಿ. ಕ್ಷಮೆ ಸಿಗದೇ ಇದ್ದರೆ, ಅಂತಹ ಸಂಬಂಧದಿಂದ ಹೊರಬಂದು ಬದುಕುವುದೇ ಉತ್ತಮ. ಇಬ್ಬರೂ ಬಾಧೆ ಪಡುವುದಕ್ಕಿಂತ ಅದುವೇ ಒಳ್ಳೆಯದು. ಆದರೆ ತಪ್ಪು ಎಲ್ಲರೂ ಮಾಡುತ್ತಾರೆ. ಹಾಗಂತ ಅದನ್ನೇ ನೆನೆಸಿಕೊಂಡು ಜೀವನ ಪರ್ಯಂತ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂಬುದನ್ನ ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ