Webdunia - Bharat's app for daily news and videos

Install App

ಕರಿಯಲು ಬಳಸಿದ ಎಣ್ಣೆಯನ್ನ ಮತ್ತೆ ಬಳಸಿದರೆ ಈ ಅಪಾಯ ಕಟ್ಟಿಟ್ಟ ಬುತ್ತಿ!

Webdunia
ಬುಧವಾರ, 11 ಏಪ್ರಿಲ್ 2018 (06:53 IST)
ಬೆಂಗಳೂರು : ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ತರಾವರಿ ಕುರುಕಲು ತಿಂಡಿಗಳನ್ನ ಮಾಡಿರುತ್ತಾರೆ. ಈ ಕುರುಕಲು ತಿಂಡಿಗಳನ್ನ ಕರಿಯಲು ಬಳಸಿದ ಎಣ್ಣೆಯನ್ನ ಹಾಗೆ ಇಟ್ಟು ಮತ್ತೆ ಅಡುಗೆ ಮಾಡುವಾಗ ಮರು ಬಳಕೆ ಮಾಡುತ್ತಾರೆ. ಆದರೆ ಇದು ಶುದ್ಧ ತಪ್ಪು. ಬಹಳಷ್ಟು ಜನರು ಗೊತ್ತಿದ್ದೋ ಗೊತ್ತಿಲದೆಯೋ ಮತ್ತೆ ಮತ್ತೆ ಇದೆ ತಪ್ಪನ್ನ ಮಾಡುತ್ತಾರೆ. ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಬಳಸುವುದು ತಪ್ಪು. ಇದರಿಂದ ಹಲವು ಆರೋಗ್ಯ ತೊಂದರೆಗಳಾಗುತ್ತವೆ.


ಒಮ್ಮೆ ಅಡುಗೆಗೆ ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದು ಖಂಡಿತಾ ಸರಿಯಾದ ಕ್ರಮವಲ್ಲ ಎನ್ನುವುದು ಹಲವು ಬಾರಿ ಖಚಿತಪಟ್ಟಿದೆ. ಇದೀಗ ಏಮ್ಸ್ ವೈದ್ಯರು ಮತ್ತೊಮ್ಮೆ ಅದನ್ನು ದೃಢಪಡಿಸಿದ್ದಾರೆ. ಏಮ್ಸ್ ವೈದ್ಯರು ನಡೆಸಿರುವ ಸಂಶೋಧನೆಯಿಂದ ಮತ್ತೊಮ್ಮೆ ಕರಿದ ಎಣ್ಣೆಯ ಮರು ಬಳಕೆ ಒಳ್ಳೆಯದಲ್ಲ ಎಂದು ಖಚಿತಪಟ್ಟಿದೆ.
ಒಮ್ಮೆ ಕರಿದ ಎಣ್ಣೆಯಲ್ಲಿ ಬೇಡದ ಕೊಬ್ಬು ಸಂಗ್ರಹವಾಗುತ್ತದೆ. ಇದನ್ನು ಮರು ಬಳಕೆ ಮಾಡುವುದರಿಂದ ಹೃದಯಾಘಾತದ ಅಪಾಯ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮರು ಬಳಕೆ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments