ಮಳೆಗಾಲದಲ್ಲಿ ಈ ತಿನಿಸುಗಳಿಂದ ದೂರವಿರಿ… ಆರೋಗ್ಯ ಕಾಪಾಡಿ…

Webdunia
ಸೋಮವಾರ, 4 ಸೆಪ್ಟಂಬರ್ 2017 (16:23 IST)
ಬೆಂಗಳೂರು: ಮಳೆಗಾಲ ಅಂದ್ರೆ ಮೋಜು ಮಸ್ತಿಗೆ ಬ್ರೇಕ್ ಇರೋದಿಲ್ಲ. ಆದರೆ ಈ ಕಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ನಮ್ಮ ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತಲ್ಲವೆ… ಮಳೆಗಾಲದ ರೋಗ ರುಜಿನಗಳಿಂದ ದೂರವಿರಬೇಕಾದ್ರೆ ನಿಮಗೆ ಪ್ರಿಯವಾದ ಈ ಆಹಾರಗಳನ್ನ ದೂರವಿಡಿ.

ಕರಿದ ತಿನಿಸುಗಳು
ಮಳೆಗಾಲದ ಚುಮು ಚುಮು ಚಳಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳು ನಾಲಿಗೆಗೆ ಸಖತ್ ರುಚಿ ಎನಿಸುತ್ತವೆ. ಆದರೆ ಇಂತಹ ಪದಾರ್ಥಗಳ ಸೇವನೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಯಾಕಂದ್ರೆ ಎಣ್ಣೆ ಪದಾರ್ಥಗಳ ಸೇವನೆಯಿಂದ ಕೆಮ್ಮು ಸಮಸ್ಯೆ ಶುರುವಾಗುತ್ತೆ. ಹೀಗಾಗಿ ನಾಲಿಗೆ ರುಚಿಗಿಂತ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.

ಬೀದಿ ಬದಿಯ ಆಹಾರ
ಮಳೆಗಾಲದಲ್ಲಿ ಬೀದಿ ಬದಿಯ ಆಹಾರ ಬೇಡವೇ ಬೇಡ. ಜ್ಯೂಸ್, ಐಸ್ ಕ್ರೀಂ, ಕ್ಯಾಂಡಿ ಮಳೆಗಾಲಕ್ಕೆ ಸೂಕ್ತವಲ್ಲ. ಇದರಲ್ಲಿರುವ ತೇವಾಂಶ ಶೀತ ಬೇಗ ಬರಲು ಸಹಕರಿಸುತ್ತೆ.

ಸೊಪ್ಪುಗಳು
ಅಡುಗೆ ಮನೆಯಲ್ಲಿ ಮಳೆಗಾಲದಲ್ಲಿ ಸೊಪ್ಪುಗಳ ಬಳಕೆ ಕಡಿಮೆ ಮಾಡಿ. ಸೊಪ್ಪುಗಳಲ್ಲಿ ಆರೋಗ್ಯಕ್ಕೆ ಬೇಕಾಂದಂತ ಅನೇಕ ಪೋಷಕಾಂಶಗಳು ಸಿಗುತ್ತವೆ ನಿಜ. ಆದರೆ ಇದರಲ್ಲಿಯ ತಂಪು ಗುಣ ಬೇಸಿಗೆಗೆ ಸೂಕ್ತ. ಕೆಲ ತರಕಾರಿಗಳನ್ನು ಸಹ ಮಳೆಗಾಲದಲ್ಲಿ ದೂರವಿಡುವುದು ಸೂಕ್ತ.

ಮಸಾಲ ಅಡುಗೆಗಳು
ಮಳೆಗಾಲದಲ್ಲಿ ನಾವು ಸೇವಿಸುವ ಆಹಾರಗಳೆಲ್ಲವೂ ಬೇಗ ಜೀರ್ಣವಾಗುವುದಿಲ್ಲ. ನೀವು ನಾನ್ ವೆಜ್ ಪ್ರಿಯರಾಗಿದ್ದರೆ ಮಾಂಸಾಹಾರ ಬದಲು ಹೆಲ್ದಿ ಸೂಪ್ ಗಳನ್ನು ತೆಗೆದುಕೊಳ್ಳುವುದು ಒಳಿತು. ಅಲ್ಲದೆ ಮಸಾಲ ಪುರಿ ಇಂತಹ ಪದಾರ್ಥಗಳಿಂದಲೂ ದೂರವಿರಿ.

ಸೀ ಫುಡ್
ಇನ್ನು ಮಳೆಗಾಲದಲ್ಲಿ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಪ್ರಿಯವಾಗುವುದು ಸೀ ಫುಡ್. ಮನೆಯಲ್ಲೇ ಆಗಲಿ,  ಪ್ರವಾಸದ ವೇಳೆಯೇ ಆಗಲಿ ಇದರಿಂದ ದೂರವಿದ್ದರೆ ನಿಮ್ಮ ಆರೋಗ್ಯ ವೃದ್ಧಿಸುತ್ತೆ. ಮಳೆಗಾಲದಲ್ಲಿ ಮೀನು, ಫ್ರಾನ್ಸ್ ಮತ್ತು ಕ್ರ್ಯಾಬ್ ಗಳು ಮೊಟ್ಟೆಯಿಡುವ ಸಮಯ. ಈ ಸಂದರ್ಭದಲ್ಲಿ ಇವುಗಳ ಸೇವನೆ ಅಷ್ಟೇನು ಒಳ್ಳೆಯದಲ್ಲ ಎಂಬುದು ಅರಿವಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಮುಂದಿನ ಸುದ್ದಿ
Show comments