Publish Date: Tue, 28 Nov 2017 (08:28 IST)
Updated Date: Tue, 28 Nov 2017 (08:32 IST)
ಬೆಂಗಳೂರು: ಚಳಿಗಾಲದಲ್ಲಿ ಹವಾಮಾನ ಬದಲಾವಣೆಗೆ ಶೀತ, ಕೆಮ್ಮು ಸಾಮಾನ್ಯ. ಕೆಮ್ಮು ಬಂತೆಂದರೆ ಬೇಗನೇ ನಮ್ಮ ದೇಹ ಬಿಟ್ಟು ಹೋಗುವ ಅಸಾಮಿಯಲ್ಲ. ಅದಕ್ಕಾಗಿ ಸಿಂಪಲ್ ಆಗಿ ಒಂದು ಮನೆ ಮದ್ದು ಮಾಡಿ ನೋಡಿ.
ಒಂದು ಲೋಟ ಹದ ಬಿಸಿ ನೀರಿಗೆ ಅರ್ಧ ಚಮಚ ಅರಸಿನ ಪುಡಿ ಹಾಕಿಕೊಂಡು ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಸೋಸಿಕೊಂಡು ಎರಡು ಸ್ಪೂನ್ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬಂದರೆ ಬಿಡದೇ ಕಾಡುವ ಕೆಮ್ಮಿಗೆ ಪರಿಹಾರ ಸಿಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ