Webdunia - Bharat's app for daily news and videos

Install App

ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಫಿಟ್ಸ್ ನಿಲ್ಲುತ್ತದಾ..?

Webdunia
ಭಾನುವಾರ, 20 ಮೇ 2018 (10:19 IST)
ಬೆಂಗಳೂರು : ಮೂರ್ಛೆ ರೋಗ ಹೆಣ್ಣು ಗಂಡು ಎಂಬ ವ್ಯತ್ಯಾಸ ಇಲ್ಲದೆ ಈ ಖಾಯಿಲೆ ಬರುತ್ತದೆ. ಆದರೆ ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ನಮ್ಮ ಪೂರ್ವಿಕರು ಕಬ್ಬಿಣ, ಬೀಗದ ಕೈಯನ್ನೋ ಐರನ್ ರಾಡನ್ನೋ ಕೊಡುತ್ತಿದ್ದರು. ಇದರಿಂದ ಮೂರ್ಛೆ ನಿಲ್ಲುತ್ತದೆ ಎಂಬುದು ಅವರ  ಭಾವನೆ. ಆದರೆ ಇದರಲ್ಲಿ ಸತ್ಯ ಎಷ್ಟು..? ನಿಜವಾಗಿ ಅಂತಹ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಮೂರ್ಛೆ ನಿಲ್ಲುತ್ತದಾ…? ಫಿಟ್ಸ್ ನಿಲ್ಲುತ್ತದಾ..? ಎಂಬುದನ್ನು ಈಗ ತಿಳಿದುಕೊಳ್ಳೋಣ.


ಮೂರ್ಛೆ ಬಂದಾಗ ಆ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌‌ಗಳನ್ನು ಇಡುವ ಬಗ್ಗೆ ಬಹಳಷ್ಟು ಮಂದಿ ವೈದ್ಯರು ಏನು ಹೇಳುತ್ತಿದ್ದಾರೆಂದರೆ… ಅದು ಎಳ್ಳಷ್ಟೂ ಪ್ರಭಾವ ತೋರುವುದಿಲ್ಲವಂತೆ. ಮೂರ್ಛೆಯನ್ನು ತಡೆಯುವ ಶಕ್ತಿ ಕಬ್ಬಿಣ, ಬೀಗದ ಕೈಗೆ ಇರಲ್ಲವಂತೆ. ಆದರೆ ಯಾರಿಗೇ ಆಗಲಿ ಮೂರ್ಛೆ ಬಂದಾಗ ಅದು 2 ರಿಂದ 5 ನಿಮಿಷಗಳ ಒಳಗೆ ಇರುತ್ತದೆ. ಅಷ್ಟರೊಳಗೆ ಅವರಷ್ಟಕ್ಕೆ ಅವರೇ ಸಾಮಾನ್ಯ ಸ್ಥಿತಿಗೆ ತಲುಪುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಕೈಗೆ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ಇಟ್ಟರೂ ಪ್ರಯೋಜನ ಇರಲ್ಲ. ಆ ರೀತಿ ಇಟ್ಟರೂ, ಹೇಗೂ ಸ್ವಲ್ಪ ಹೊತ್ತಿಗೆ ಸಾಮಾನ್ಯ ಸ್ಥಿತಿಗೆ ತಲುಪುತ್ತಾರೆ. ಬಹಳಷ್ಟು ಮಂದಿ ಕಬ್ಬಿಣ ಕೆಲಸ ಮಾಡಿತೆಂದು ಭಾವಿಸುತ್ತಾರೆ. ಆದರೆ ಇದರಲ್ಲಿ ಸ್ವಲ್ಪವೂ ನಿಜ ಇಲ್ಲ ಎನ್ನುತ್ತಿದ್ದಾರೆ ನ್ಯೂರೋ ಸರ್ಜನ್ನರು.
ಆದರೆ ಮೂರ್ಛೆ ಬಂದಾಗ ಅಂತಹ ವ್ಯಕ್ತಿಗಳ ಬಗ್ಗೆ ಸ್ವಲ್ಪ ಎಚ್ಚರಿಕೆಗಳನ್ನು ಮಾತ್ರ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಅವೇನೆಂದರೆ… ಮೂರ್ಛೆ ಬಂದಾಗ ರೋಗಿಯನ್ನು ನೆಲದ ಮೇಲೆ ಮಲಗಿಸಬೇಕು. ಫಿಟ್ಸ್‌ನಿಂದ ಒದ್ದಾಡುತ್ತಾ ಅತ್ತಿಂದಿತ್ತ ಜೋರಾಗಿ ಅಲುಗಾಡುತ್ತಿದ್ದರೆ, ಹಾಗೆಯೇ ಬಿಡಬೇಕು. ಅದನ್ನು ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದರೆ ಸಡನ್ ಆಗಿ ಅಟ್ಯಾಕ್ ಆಗುವ ಅವಕಾಶ ಇರುತ್ತದೆ. ಅದೇ ರೀತಿ ಮೂರ್ಛೆ ಬಂದ ರೋಗಿ ಬಾಯಲ್ಲಿ ಎಂತಹ ವಸ್ತುಗಳನ್ನೂ ಇಡಬಾರದು. ವಾಂತಿಯಾಗುತ್ತಿದ್ದರೆ ಮಾಡಿಕೊಳ್ಳಲು ಬಿಡಬೇಕು. ಸೂಕ್ತ ಗಾಳಿ ಆಡುವಂತೆ ನೋಡಿಕೊಳ್ಳಬೇಕು. ಕೂಡಲೆ ವೈದ್ಯರ ಬಳಿಗೆ ಕರೆದೊಯ್ಯಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments