Select Your Language

Notifications

webdunia
webdunia
webdunia
webdunia

ಎಎಪಿ ಅಭ್ಯರ್ಥಿ ಅತಿಷಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗೌತಮ್ ಗಂಭೀರ್

ಎಎಪಿ ಅಭ್ಯರ್ಥಿ ಅತಿಷಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗೌತಮ್ ಗಂಭೀರ್
ನವದೆಹಲಿ , ಶುಕ್ರವಾರ, 10 ಮೇ 2019 (07:28 IST)
ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಎದುರಾಳಿ ಎಎಪಿ ಅಭ‍್ಯರ್ಥಿ ಅತಿಷಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

 
ಗಂಭೀರ್ ಅತಿಷಿ ಮತ್ತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ.

ಗಂಭೀರ್ ತಮ್ಮ ವಿರುದ್ಧ ತೀರಾ ಅಶ್ಲೀಲ ಪಾಂಪ್ಲೆಟ್ ಹಂಚಿದ್ದಾರೆಂದು ಅತಿಷಿ ಕಣ್ಣೀರಿಡುತ್ತಾ ಮಾಧ್ಯಮಗೋಷ್ಠಿಯಲ್ಲಿ ಭಾರೀ ಆರೋಪ ಮಾಡಿದ್ದರು. ಒಬ್ಬ ಮಹಿಳೆಯನ್ನು ಸೋಲಿಸಲು ಗಂಭೀರ್ ಇಷ್ಟೊಂದು ಕೀಳುಮಟ್ಟಕ್ಕಿಳಿಯುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದರು. ಆದರೆ ಈ ಆರೋಪವನ್ನು ನಿರಾಕರಿಸಿರುವ ಗಂಭೀರ್ ನನ್ನ ಮೇಲಿನ ಆರೋಪ ಸಾಬೀತಾದರೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವೆ ಎಂದಿದ್ದರು. ಅಲ್ಲದೆ ಇದೀಗ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀವ್ ಗಾಂಧಿ ಐಎನ್ಎನ್ ವಿರಾಟ್ ವಿವಾದದಲ್ಲಿ ಅಮಿತಾಭ್ ಬಚ್ಚನ್ ಎಳೆದು ತಂದ ರಮ್ಯಾ