Select Your Language

Notifications

webdunia
webdunia
webdunia
webdunia

ಈಶ್ವರಪ್ಪರನ್ನ ಸೀರಿಯಸ್ ಆಗೇ ತಗೆದ್ಕೊಂಡಿಲ್ಲ…!

ಈಶ್ವರಪ್ಪರನ್ನ ಸೀರಿಯಸ್ ಆಗೇ ತಗೆದ್ಕೊಂಡಿಲ್ಲ…!
ಶಿವಮೊಗ್ಗ , ಶುಕ್ರವಾರ, 19 ಏಪ್ರಿಲ್ 2019 (17:02 IST)
ಕೆ.ಎಸ್.ಈಶ್ವರಪ್ಪ ಅವರನ್ನು ಅವರ ಪಕ್ಷದವರೇ ಅವರನ್ನ ಸೀರಿಯಸ್ ಆಗಿ ತಗೆದುಕೊಂಡಿಲ್ಲ. ಹೀಗಂತ ಸಚಿವರೊಬ್ಬರು ವ್ಯಂಗ್ಯವಾಡಿದ್ದಾರೆ.

ವಿಮಾನ ತಯಾರಿಕೆಯಲ್ಲಿ ಗಂಧ ಗಾಳಿ ಗೊತ್ತಿಲ್ಲದ ಅಂಬಾನಿಗೆ ರೇಫಲ್ ವಿಮಾನ ಖರೀದಿ ಮಾಡುವುದಕ್ಕೆ ಟೆಂಡರ್ ಕೊಟ್ಟಿದ್ದೀರಾ? ಇದರಿಂದ  ಸಹಸ್ರ ಸಂಖ್ಯೆಯ ಕೆಲಸಗಾರರು ಕೆಲಸ ಕಳೆದುಕೊಳ್ಳಲಿದ್ದಾರೆ. ವಿಜಯ್ ಬ್ಯಾಂಕ್ ಅನ್ನು ಬರೋಡಾ ಬ್ಯಾಂಕ್ ನೊಂದಿಗೆ ಲೀನ ಮಾಡಲಾಯಿತು.

ವಿಜಯ್ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್, ಬ್ಯಾಂಕ್ ಲಾಭದಲ್ಲಿ ಇರಲಿಲ್ವ? ಇದರ ಬಗ್ಗೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ  ಸೇರಿದಂತೆ ರಾಜ್ಯದ ಸಂಸದರು ಯಾರು ಕೂಡ ಮಾತನಾಡಲಿಲ್ಲ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಇನ್ನು ಕೆ.ಎಸ್.ಈಶ್ವರಪ್ಪ ನವರನ್ನ ನಾವು ಸೀರಿಯಸ್ ಆಗಿ ತಗೆದುಕೊಂಡಿಲ್ಲ. ಅವರ ಪಕ್ಷದವರೆ ಅವರನ್ನ ಸೀರಿಯಸ್ ಆಗಿ ತಗೆದುಕೊಂಡಿಲ್ಲ. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಎಂದು ನಮಗೆಲ್ಲ ಗೊತ್ತಿದೆ. ಮತಕ್ಕಾಗಿ ಅಲ್ಲೊಂದು ಇಲ್ಲೊಂದು ಈಶ್ವರಪ್ಪ ಮಾತನಾಡುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಜಾತಿ ಬಗ್ಗೆ ಮಾತನಾಡೋದಕ್ಕೆ ನಾಚಿಕೆ ಆಗ್ಬೇಕು ಎಂದ ಸಚಿವ