Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಬಿಗ್ ಶಾಕ್; ಅಪರೇಶನ್ ಹಸ್ತದ ಪ್ರಭಾವಕ್ಕೊಳಗಾದ ಬಿಜೆಪಿ ಮಾಜಿ ಶಾಸಕ

ಬಿಜೆಪಿಗೆ ಬಿಗ್ ಶಾಕ್; ಅಪರೇಶನ್ ಹಸ್ತದ ಪ್ರಭಾವಕ್ಕೊಳಗಾದ ಬಿಜೆಪಿ ಮಾಜಿ ಶಾಸಕ
ಗದಗ , ಸೋಮವಾರ, 8 ಏಪ್ರಿಲ್ 2019 (12:55 IST)
ಗದಗ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಗದಗದಲ್ಲಿ ಕಾಂಗ್ರೆಸ್ ನಾಯಕರು ರಾತ್ರೋರಾತ್ರಿ ಆಪರೇಷನ್ ಹಸ್ತ  ನಡೆಸಿದ್ದು, ಬಿಜೆಪಿ ಮಾಜಿ ಶಾಸಕರೊಬ್ಬರನ್ನು ಸೆಳೆಯುವಲ್ಲಿ  ಸಕ್ಸಸ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಹೌದು. ಗದಗದಲ್ಲಿ ಕಾಂಗ್ರೆಸ್ ನಾಯಕರು ರಾತ್ರೋರಾತ್ರಿ ಆಪರೇಷನ್ ಹಸ್ತ  ನಡೆಸಿ  ಗದಗ ಲಿಂಗಾಯತ ಪ್ರಭಾವಿ ನಾಯಕ ಹಾಗೂ ಬಿಜೆಪಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಶ್ರೀಶೈಲಪ್ಪ ಬಿದರೂರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಜೊತೆ ಮಾತುಕತೆ ಮಾಡಿರುವ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.


ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ತಟಸ್ಥವಾಗಿ ಉಳಿದಿದ್ದ ಬಿಜೆಪಿ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಕಮಲ ಬಿಟ್ಬು ಕೈ ಹಿಡಿಯಲು ಬಿಜೆಪಿ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಸಜ್ಜಾಗಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಭೀತಿಗೆ ಇಡೀ ಕುಟುಂಬ ಪ್ರಚಾರ ಮಾಡ್ತಿದೆ- ಸಿಎಂ ಕಾಲೆಳೆದ ಈಶ್ವರಪ್ಪ