Publish Date: Tue, 23 Apr 2019 (16:27 IST)
Updated Date: Tue, 23 Apr 2019 (16:28 IST)
ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸೋಕೆ ಹೋಗಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮತಗಟ್ಟೆ ಅಧಿಕಾರ ಮೇಲೆ ರೇಗಾಡಿದ್ದಾರೆ.
ಹಾವೇರಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಈ ಕೆಲಸ ಮಾಡಿದ್ದಾರೆ. ಮತದಾನ ಸಂದರ್ಭದಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕರ ಗರಂ ಆದ ಬಿಜೆಪಿ ಅಭ್ಯರ್ಥಿ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹಾನಗಲ್ ಪಟ್ಟಣದ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತಗಟ್ಟೆ ಅಧಿಕಾರಿ ಮೇಲೆ ಶಿವಕುಮಾರ್ ಉದಾಸಿ ಗರಂ ಆಗಿ ಮಾತನಾಡಿದ್ದು, ಅಲ್ಲಿದ್ದ ಜನರಲ್ಲಿ ಚರ್ಚೆಗೆ ಕಾರಣವಾಯಿತು.