Webdunia - Bharat's app for daily news and videos

Install App

ಪತ್ನಿಯೇ ಪತಿಯನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ

Krishnaveni K
ಬುಧವಾರ, 11 ಜೂನ್ 2025 (09:11 IST)
Photo credit: AI Image
ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಪತ್ನಿಯಾದವಳು ಪತಿಯನ್ನು ದೇವರಂತೆ ಆರಾಧಿಸುತ್ತಾಳೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಲವು ಘಟನೆಗಳು ನಡೆಯುತ್ತಿವೆ. ಇಷ್ಟಕ್ಕೂ ಪತ್ನಿ ಪತಿಯನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ? ಸೈಕಾಲಜಿ ಏನು ಹೇಳುತ್ತದೆ ಇಲ್ಲಿದೆ ನೋಡಿ ವಿವರ.


ಹೆಚ್ಚಿನ ಸಂದರ್ಭಗಳಲ್ಲಿ ಅನೈತಿಕ ಸಂಬಂಧಕ್ಕೆ ಸಿಲುಕಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗಿರುತ್ತದೆ. ಈಗ ನಡೆಯುತ್ತಿರುವ ರಾಜ ರಘುವಂಶಿ ಕೇಸ್ ಇರಲಿ, ಇದಕ್ಕೆ ಮೊದಲು ನಡೆದ ಕಾರ್ಕಳದ ಪ್ರತಿಮಾ ಕೇಸ್ ಇರಲಿ ಎಲ್ಲದರ ಹಿಂದೆ ಅನೈತಿಕ ಸಂಬಂಧವೇ ಕೊಲೆ ಹಂತಕ್ಕೆ ಹೋಗುವ ಮನಸ್ಥಿತಿಗೆ ಮಹಿಳೆಯರನ್ನು ತಂದು ನಿಲ್ಲಿಸಿರುತ್ತದೆ.

ಬಹುತೇಕ ಸಂದರ್ಭಗಳಲ್ಲಿ ತಮ್ಮ ಸಂಬಂಧಕ್ಕೆ ಸಮಾಜ ಅಥವಾ ಮನೆಯವರು ಏನನ್ನುತ್ತದೋ ಎಂಬ ಭಯ. ಅತ್ತ ಗಂಡನನ್ನೂ ಬಿಡಲಾಗದೇ ಇತ್ತ ಸಮಾಜವನ್ನೂ ಎದುರಿಸಲಾಗದ ಸಂದರ್ಭ ಬಂದಾಗ ಮಹಿಳೆಯರು ಇಂಥಾ ಹಾದಿಯನ್ನು ಹಿಡಿಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಪ್ರಿಯಕರನ ಧೈರ್ಯದಲ್ಲೇ ಈ ಸಾಹಸಕ್ಕೆ ಕೈ ಹಾಕುತ್ತಾಳೆ.

ಬಲವಂತದ ಮದುವೆ, ಒಲ್ಲದ ಗಂಡನೊಂದಿಗೆ ಸಂಸಾರ ಬೇರೊಂದು ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಒಲ್ಲದ ಸಂಬಂಧವನ್ನು ದೂರವಾಗಲು ವಿಚ್ಛೇದನದಂತಹ ಅವಕಾಶಗಳಿದ್ದರೂ ಬಾಹ್ಯ ಒತ್ತಡಕ್ಕೆ ಒಳಗಾಗಿ ಅಥವಾ ಪ್ರಿಯಕರನ ಮೇಲಿನ ಅತಿಯಾದ ವ್ಯಾಮೋಹ ಇಂತಹ ಕೆಲಸಕ್ಕೆ ಕೈ ಹಾಕಿಸುತ್ತದೆ.

ವಿಚ್ಛೇದನ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಗಂಡನಿಂದ ದೂರವಾಗಲು ಸುಲಭ ದಾರಿ ಯಾವುದು ಎಂದು ನೋಡಿಕೊಳ್ಳುತ್ತಾರೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾಗಳು, ಅಂತರ್ಜಾಲಗಳ ಪ್ರಭಾವ ಹಲವು ಕೆಟ್ಟ ನಿರ್ಧಾರಗಳಿಗೆ ಕಾರಣವಾಗಬಹುದು. ತನ್ನ ಕೆಲಸಕ್ಕೆ ಒಬ್ಬರ ಬೆಂಬಲ ಸಿಗುತ್ತದೆ ಎನ್ನುವಾಗ ಎಂತಹದ್ದೇ ದುಸ್ಸಾಹಸಕ್ಕೆ ಕೈ ಹಾಕಲು ಮನುಷ್ಯ ಮುಂದಾಗುತ್ತಾನೆ. ಇಲ್ಲಿ ಆಗುತ್ತಿರುವುದೂ ಇದೇ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments