ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ, ಈ ವಿಧಾನ ಅನುಸರಿಸಿ

Krishnaveni K
ಶನಿವಾರ, 27 ಸೆಪ್ಟಂಬರ್ 2025 (12:08 IST)
ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಖಾಯಿಲೆಗಳ ಮೂಲ ಮಾನಸಿಕ ಒತ್ತಡ. ಹೃದಯದ ಸಮಸ್ಯೆ, ಮಧುಮೇಹ, ದೇಹ ತೂಕ ಸೇರಿದಂತೆ ಬಹುತೇಕ ಖಾಯಿಲೆಗಳು ಮಾನಸಿಕ ಒತ್ತಡದಿಂದಾಗಿಯೇ ಬರುತ್ತವೆ. ಇದನ್ನು ಕಡಿಮೆ ಮಾಡಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ.

ದೈಹಿಕ ಚಟುವಟಿಕೆ ಇರಲಿ: ಕುಳಿತಲ್ಲೇ ಕೂರುವ ಬದಲು ನಿಮ್ಮ ದೇಹಕ್ಕೆ ಚಟುವಟಿಕೆ ಕೊಡುವ ಕೆಲಸ ಮಾಡಿ. ದೇಹಕ್ಕೆ ಶ್ರಮ ಕೊಟ್ಟರೆ ಮಾನಸಿಕ ಒತ್ತಡ ಎನ್ನುವುದು ನೆನಪೇ ಆಗಲ್ಲ. ದೈಹಿಕ ಚಟುವಟಿಕೆ ಮಾಡುತ್ತಿದ್ದರೆ ನಿಮ್ಮ ಖುಷಿಯ ಹಾರ್ಮೋನ್ ಗಳು ಆಕ್ಟಿವೇಟ್ ಆಗುತ್ತವೆ.

ಸರಿಯಾದ ನಿದ್ರೆ: ನಿದ್ರಾಹೀನತೆಯಿಂದ ಮಾನಸಿಕ ಒತ್ತಡ ಕಂಡುಬರಬಹುದು. ಹೀಗಾಗಿ ನಿದ್ರೆಗೆ ಪ್ರಾಮುಖ್ಯತೆ ಕೊಡಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗುವುದು, ನಿರ್ದಿಷ್ಟ ಸಮಯದಷ್ಟೇ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಮತೋಲಿತ ಆಹಾರ ಸೇವಿಸಿ: ನಾವು ಸೇವನೆ ಮಾಡುವ ಆಹಾರವೂ ಮುಖ್ಯವಾಗಿರುತ್ತದೆ. ಸಮತೋಲಿತ, ಎಲ್ಲಾ ವಿಧದ ಪೋಷಕಾಂಶಗಳು ಒಳಗೊಂಡಂತಹ ಆಹಾರವನ್ನು ಸೇವನೆ ಮಾಡಿ. ಕೆಫೈನ್ ಅಂಶವಿರುವ, ಆಲ್ಕೋಹಾಲ್ ಅಂಶವಿರುವ, ಧೂಮಪಾನ, ತಂಬಾಕಿನ ಉತ್ಪನ್ನಗಳ ಸೇವನೆ ಒತ್ತಡವನ್ನು ಹೆಚ್ಚು ಮಾಡಬಹುದು.

ಇತರರೊಂದಿಗೆ ಬೆರೆಯಿರಿ: ಆದಷ್ಟು ಸೋಷಿಯಲ್ ಆಗಿ ಇರಿ. ಸಮಾಜಮುಖಿಯಾಗಿ, ಇತರರೊಂದಿಗೆ ಮಾತನಾಡುತ್ತಾ, ಬೆರೆಯುತ್ತಾ ಇದ್ದರೆ ಒತ್ತಡ ಮರೆಯುತ್ತೀರಿ. ಅದೇ ರೀತಿ ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ.

ದೇಹ, ಮನಸ್ಸಿಗೆ ವಿಶ್ರಾಂತಿ: ಇದು ಸಿಗಬೇಕೆಂದರೆ ಯೋಗ, ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. 1 ರಿಂದ 4 ಎಣಿಸುವಷ್ಟು ಹೊತ್ತು ಉಸಿರು ಒಳಗೆ ಎಳೆದುಕೊಂಡು 7 ಕೌಂಟ್ ನಷ್ಟು ಉಸಿರು ಬಿಗಿಹಿಡಿಯಬೇಕು. ಬಳಿಕ ನಿಧಾನವಾಗಿ 8 ಕೌಂಟ್ ಆಗುವವರೆಗೆ ಉಸಿರನ್ನು ಹೊರಗೆ ಹಾಕಬೇಕು.

ಈ ಕೆಲವು ಟಿಪ್ಸ್ ಗಳಿಂದ ಮಾನಸಿಕ ಒತ್ತಡವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಹಬ್ಬಕ್ಕೆ ದಿನಗಣನೆ: ಪಟಾಕಿ ದುರಂತ ತಡೆಗೆ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಒಡಿಶಾ: ಬಿಜೆಪಿ ಮುಖಂಡ ಪಿತಾಬಾಷ್ ಪಾಂಡಾ ಬರ್ಹಾಂಪುರದಲ್ಲಿ ಗುಂಡಿಕ್ಕಿ ಹತ್ಯೆ

ಬುರುಡೆ ಗ್ಯಾಂಗ್ ಜತೆಗಿನ ನಂಟಿನ ಬಗ್ಗೆ ಸುಜಾತಾ ಭಟ್ ಸ್ಫೋಟಕ ಹೇಳಿಕೆ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ; ವಕೀಲರ ಪ್ರತಿಕ್ರಿಯೆ ಕೇಳಿದ್ರೆ ಶಾಕ್

Karnataka Weather: ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ

ಮುಂದಿನ ಸುದ್ದಿ
Show comments