ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ, ಈ ವಿಧಾನ ಅನುಸರಿಸಿ

Krishnaveni K
ಶನಿವಾರ, 27 ಸೆಪ್ಟಂಬರ್ 2025 (12:08 IST)
ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಖಾಯಿಲೆಗಳ ಮೂಲ ಮಾನಸಿಕ ಒತ್ತಡ. ಹೃದಯದ ಸಮಸ್ಯೆ, ಮಧುಮೇಹ, ದೇಹ ತೂಕ ಸೇರಿದಂತೆ ಬಹುತೇಕ ಖಾಯಿಲೆಗಳು ಮಾನಸಿಕ ಒತ್ತಡದಿಂದಾಗಿಯೇ ಬರುತ್ತವೆ. ಇದನ್ನು ಕಡಿಮೆ ಮಾಡಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ.

ದೈಹಿಕ ಚಟುವಟಿಕೆ ಇರಲಿ: ಕುಳಿತಲ್ಲೇ ಕೂರುವ ಬದಲು ನಿಮ್ಮ ದೇಹಕ್ಕೆ ಚಟುವಟಿಕೆ ಕೊಡುವ ಕೆಲಸ ಮಾಡಿ. ದೇಹಕ್ಕೆ ಶ್ರಮ ಕೊಟ್ಟರೆ ಮಾನಸಿಕ ಒತ್ತಡ ಎನ್ನುವುದು ನೆನಪೇ ಆಗಲ್ಲ. ದೈಹಿಕ ಚಟುವಟಿಕೆ ಮಾಡುತ್ತಿದ್ದರೆ ನಿಮ್ಮ ಖುಷಿಯ ಹಾರ್ಮೋನ್ ಗಳು ಆಕ್ಟಿವೇಟ್ ಆಗುತ್ತವೆ.

ಸರಿಯಾದ ನಿದ್ರೆ: ನಿದ್ರಾಹೀನತೆಯಿಂದ ಮಾನಸಿಕ ಒತ್ತಡ ಕಂಡುಬರಬಹುದು. ಹೀಗಾಗಿ ನಿದ್ರೆಗೆ ಪ್ರಾಮುಖ್ಯತೆ ಕೊಡಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗುವುದು, ನಿರ್ದಿಷ್ಟ ಸಮಯದಷ್ಟೇ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಮತೋಲಿತ ಆಹಾರ ಸೇವಿಸಿ: ನಾವು ಸೇವನೆ ಮಾಡುವ ಆಹಾರವೂ ಮುಖ್ಯವಾಗಿರುತ್ತದೆ. ಸಮತೋಲಿತ, ಎಲ್ಲಾ ವಿಧದ ಪೋಷಕಾಂಶಗಳು ಒಳಗೊಂಡಂತಹ ಆಹಾರವನ್ನು ಸೇವನೆ ಮಾಡಿ. ಕೆಫೈನ್ ಅಂಶವಿರುವ, ಆಲ್ಕೋಹಾಲ್ ಅಂಶವಿರುವ, ಧೂಮಪಾನ, ತಂಬಾಕಿನ ಉತ್ಪನ್ನಗಳ ಸೇವನೆ ಒತ್ತಡವನ್ನು ಹೆಚ್ಚು ಮಾಡಬಹುದು.

ಇತರರೊಂದಿಗೆ ಬೆರೆಯಿರಿ: ಆದಷ್ಟು ಸೋಷಿಯಲ್ ಆಗಿ ಇರಿ. ಸಮಾಜಮುಖಿಯಾಗಿ, ಇತರರೊಂದಿಗೆ ಮಾತನಾಡುತ್ತಾ, ಬೆರೆಯುತ್ತಾ ಇದ್ದರೆ ಒತ್ತಡ ಮರೆಯುತ್ತೀರಿ. ಅದೇ ರೀತಿ ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ.

ದೇಹ, ಮನಸ್ಸಿಗೆ ವಿಶ್ರಾಂತಿ: ಇದು ಸಿಗಬೇಕೆಂದರೆ ಯೋಗ, ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. 1 ರಿಂದ 4 ಎಣಿಸುವಷ್ಟು ಹೊತ್ತು ಉಸಿರು ಒಳಗೆ ಎಳೆದುಕೊಂಡು 7 ಕೌಂಟ್ ನಷ್ಟು ಉಸಿರು ಬಿಗಿಹಿಡಿಯಬೇಕು. ಬಳಿಕ ನಿಧಾನವಾಗಿ 8 ಕೌಂಟ್ ಆಗುವವರೆಗೆ ಉಸಿರನ್ನು ಹೊರಗೆ ಹಾಕಬೇಕು.

ಈ ಕೆಲವು ಟಿಪ್ಸ್ ಗಳಿಂದ ಮಾನಸಿಕ ಒತ್ತಡವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2026ರ ಹೊಸ ವರ್ಷದಂದು ಸಂಭ್ರಮಕ್ಕೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ

ಇಂಡೋನೇಷ್ಯಾ ವೃದ್ಧಾಶ್ರಮದಲ್ಲಿ ಬೆಂಕಿ ಅವಘಡ: 10 ವೃದ್ಧರು ಸಜೀವ ದಹನ

ಏನಿದು ದೇಶವನ್ನೇ ಬೆಚ್ಚಿಬೀಳಿಸಿದ ಉನ್ನಾವೋ ಅತ್ಯಾಚಾರ ಪ್ರಕರಣ, ಸಂಪೂರ್ಣ ಮಾಹಿತಿ ಇಲ್ಲಿದೆ

ಉನ್ನಾವೋ ಅತ್ಯಾಚಾರ ಪ್ರಕರಣ: ಸುಪ್ರೀಂ ತೀರ್ಪಿಗೆ ಸಂತ್ರಸ್ತೆ ಶ್ಲಾಘನೆ

ದೆಹಲಿಯಲ್ಲಿ ಆವರಿಸಿದ ದಟ್ಟ ಮಂಜು, ವಿಮಾನ, ರೈಲು ಸಂಚಾರಕ್ಕೆ ಭಾರೀ ಅಡ್ಡಿ

ಮುಂದಿನ ಸುದ್ದಿ
Show comments