Webdunia - Bharat's app for daily news and videos

Install App

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

Krishnaveni K
ಮಂಗಳವಾರ, 29 ಜುಲೈ 2025 (10:27 IST)
ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಈ ಒಂದು ವಿಚಾರವನ್ನು ಗಮನಿಸಬೇಕು ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಪದ್ಮಿನಿ ಪ್ರಸಾದ್ ಈ ಹಿಂದೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನು ಮಹಿಳೆಯರು ತಪ್ಪದೇ ಗಮನಿಸಬೇಕು.

ಗರ್ಭಧಾರಣೆ ಎನ್ನುವುದು ಇತ್ತೀಚೆಗೆ ಮಹಿಳೆಯರಿಗೆ ಅತಿ ಪ್ರಯಾಸಕರವಾಗುತ್ತಿದೆ. ಇದಕ್ಕೆ ಅವರ ಜೀವನ ಶೈಲಿಯೇ ಪ್ರಮುಖ ಕಾರಣವಾಗುತ್ತಿದೆ. ಕೆಲಸದ ಒತ್ತಡ,ತಡವಾಗಿ ಮದುವೆ ಇತ್ಯಾದಿ ಕೂಡಾ ಗರ್ಭಧಾರಣೆ ಮೇಲೆ ಪರಿಣಾಮ ಬೀರುತ್ತದೆ.

ಅದೆಲ್ಲದಕ್ಕಿಂತ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆಯರೂ ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಕೆಲವರಿಗಂತೂ ಇದು ಚಟವಾಗಿ ಬಿಟ್ಟಿರುತ್ತದೆ. ಒಂದು ವೇಳೆ ಮಹಿಳೆಯರಿಗೆ ಈ ಎರಡು ಅಭ್ಯಾಸಗಳಿದ್ದರೆ ಗರ್ಭಧಾರಣೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.

ಮಹಿಳೆಯರು ಧೂಮಪಾನ, ಮದ್ಯಪಾನದ ಅಭ್ಯಾಸ ಹೊಂದಿದ್ದಲ್ಲಿ ಅವರಿಗೆ ಗರ್ಭಧಾರಣೆ ಕಷ್ಟವಾಗುತ್ತದೆ. ಗರ್ಭಿಣಿಯಾಗಿದ್ದಾಗಲೂ ಧೂಮಪಾನ, ಮದ್ಯಪಾನ ಮಾಡಿದಲ್ಲಿ ಗರ್ಭಪಾತವಾಗುವ ಅಪಾಯವಿದೆ. ಅಥವಾ ಹುಟ್ಟುವ ಮಗು ಸರಿಯಾಗಿ ಬೆಳವಣಿಗೆ ಆಗದೇ ಇರುವುದು, ಅವಧಿ ಪೂರ್ವ ಪ್ರಸವ, ಮಗುವಿನ ಬೆಳವಣಿಗೆಗೆ ಸಮಸ್ಯೆ ಇತ್ಯಾದಿ ಅಪಾಯವಿದೆ. ಹೀಗಾಗಿ ಗರ್ಭಧಾರಣೆಗೆ ಪ್ರಯತ್ನಿಸುವಾಗಲೇ ಇಂತಹ ಚಟವನ್ನು ಬಿಡುವುದು ಉತ್ತಮ. ನೇರವಾಗಿ ಅಲ್ಲದೇ ಇದ್ದರೂ ಸಂಗಾತಿಗೆ ಈ ಅಭ್ಯಾಸವಿದ್ದು ಪರೋಕ್ಷವಾಗಿ ಧೂಮಪಾನದ ಹೊಗೆ ನುಂಗುತ್ತಿದ್ದರೂ ಇಂತಹ ಅಪಾಯಗಳಿವೆ ಎಂದು ಡಾ ಪದ್ಮಿನಿ ಪ್ರಸಾದ್ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಮುಂದಿನ ಸುದ್ದಿ
Show comments