Webdunia - Bharat's app for daily news and videos

Install App

ಹೆಚ್ಚು ಕೆಲಸ ಮಾಡಿದ್ರೆ ಹೃದಯಕ್ಕೆ ತೊಂದರೆಯಾಗುತ್ತಾ: ಡಾ ಸಿಎನ್ ಮಂಜುನಾಥ್ ಹೇಳುವುದೇನು

Krishnaveni K
ಶುಕ್ರವಾರ, 4 ಜುಲೈ 2025 (09:34 IST)
Photo Credit: X
ಬೆಂಗಳೂರು: ಇತ್ತೀಚೆಗೆ ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೇ ಜನರಲ್ಲಿ ಆತಂಕ ಹೆಚ್ಚಿದೆ. ಹೃದಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿದೆ. ಹೃದಯದ ಆರೋಗ್ಯದ ಬಗ್ಗೆ ಹಲವು ಅನುಮಾನಗಳೂ ಇವೆ. ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ ಹೃದಯಾಘಾತವಾಗುತ್ತಾ? ಈ ಒಂದು ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೇಳಿರುವ ಉತ್ತರ ಹೀಗಿದೆ ನೋಡಿ.

ಹೃದಯದ ಖಾಯಿಲೆ ಇರುವವರು ಅತಿಯಾಗಿ ಭಾರ ಎತ್ತುವುದು, ಶ್ರಮದ ಕೆಲಸ ಮಾಡುವುದರಿಂದ ಸಮಸ್ಯೆಯಾಗಬಹುದು ಎಂಬುದು ಸಾಮಾನ್ಯವಾಗಿ ವೈದ್ಯರು ನೀಡುವ ಸಲಹೆ. ಆದರೆ ಹೆಚ್ಚು ಕೆಲಸ ಮಾಡುವುದರಿಂದ ಹೃದಯಾಘಾತವಾಗುತ್ತಾ? ಈ ಅನುಮಾನಕ್ಕೆ ಡಾ ಸಿಎನ್ ಮಂಜುನಾಥ್ ಹೀಗಂತ ಉತ್ತರಿಸಿದ್ದಾರೆ.

ಕೆಲಸ ಮಾಡುವುದಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿಲ್ಲ. ಹೆಚ್ಚು ಕೆಲಸ ಮಾಡುವುದರಿಂದ ನಮ್ಮ ಹೃದಯಕ್ಕೆ ಹಾನಿಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆದರೆ ನಾವು ಮಾಡುವ ಕೆಲಸ ನಮಗೆ ಎಷ್ಟು ಖುಷಿ ಕೊಡುತ್ತಿದೆ ಎನ್ನುವುದು ಮುಖ್ಯ.

ಕೆಲಸ ಮಾಡುವುದರಿಂದ ಹೃದಯದ ಆರೋಗ್ಯ ಹಾಳಾಗದು. ಆದರೆ ಒತ್ತಡದಲ್ಲಿ ಕೆಲಸ ಮಾಡಿದರೆ, ಮನಸ್ಸಿಗೆ ಸಂತೋಷವಿಲ್ಲದೇ ಕೆಲಸ ಮಾಡಿದರೆ ಅದರಿಂದ ಮಾನಸಿಕವಾಗಿ ಶ್ರಮ, ಒತ್ತಡವಾಗಬಹುದು. ಇದು ಸಹಜವಾಗಿಯೇ ರಕ್ತದೊತ್ತಡ, ಮಧುಮೇಹದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಹೃದಯದ ಆರೋಗ್ಯಕ್ಕೆ ಒತ್ತಡವೂ ಪ್ರಮುಖ ಕಾರಣ. ಹೀಗಾಗಿ ನಾವು ಎಷ್ಟು ಇಷ್ಟಪಟ್ಟು ಕೆಲಸ ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಹೃದಯವೂ ಆರೋಗ್ಯವಾಗಿರುತ್ತದೆ ಎನ್ನುತ್ತಾರೆ ಡಾ ಮಂಜುನಾಥ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಎಸ್ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್ಐಆರ್: ಕಾರಣವೇನು

Karnataka Weather: ಇಂದಿನ ಹವಾಮಾನ, ಈ ಜಿಲ್ಲೆಗಳಲ್ಲಿ ಇಂದೂ ಸುರಿಯಲಿದೆ ಧಾರಾಕಾರ ಮಳೆ

ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ವಿರುದ್ಧ ಎಫ್‌ಐಆರ್‌

ರಾಜಸ್ಥಾನ: ಇನ್ನೇನು ವಧುವಿಗೆ ತಾಳಿ ಕಟ್ಬೇಕು,ಇಡಿ ದಾಳಿ, ವರ ಮದುವೆ ಬಿಟ್ಟು ಪರಾರಿ

ಡಾಬರ್ ಚ್ಯವನಪ್ರಾಶ್ ಜಾಹೀರಾತು ನೀಡದಂತೆ ಹೈಕೋರ್ಟ್ ಪತಂಜಲಿಗೆ ತಡೆಯಾಜ್ಟೆ: ರಾಮ್‌ದೇವ್‌ಗೆ ಹಿನ್ನಡೆ

ಮುಂದಿನ ಸುದ್ದಿ
Show comments