Select Your Language

Notifications

webdunia
webdunia
webdunia
webdunia

ವಿಶ್ವಕಪ್ ಸೋಲಿಗೆ ಧೋನಿಯೇ ಕಾರಣ ಎಂದ ಯುವರಾಜ್ ಸಿಂಗ್ ತಂದೆ ಯೋಗರಾಜ್

ವಿಶ್ವಕಪ್ ಸೋಲಿಗೆ ಧೋನಿಯೇ ಕಾರಣ ಎಂದ ಯುವರಾಜ್ ಸಿಂಗ್ ತಂದೆ ಯೋಗರಾಜ್
ನವದೆಹಲಿ , ಬುಧವಾರ, 17 ಜುಲೈ 2019 (10:20 IST)
ನವದೆಹಲಿ: ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋಲಲು ಧೋನಿಯೇ ಕಾರಣ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ.


ಸದಾ ಧೋನಿ ವಿರುದ್ಧ ಕಿಡಿ ಕಾರುವ ಯೋಗರಾಜ್ ಸಿಂಗ್ ಈಗ ಧೋನಿ ಉದ್ದೇಶ ಪೂರ್ವಕವಾಗಿಯೇ ಸೋಲಲು ಕಾರಣರಾದರು ಎಂದು ಆರೋಪಿಸಿದ್ದಾರೆ. ಈ ಮೊದಲು ಯುವರಾಜ್ ಸಿಂಗ್ ವೃತ್ತಿ ಜೀವನ ಕುಂಠಿತವಾಗಲು ಧೋನಿ ಕಾರಣ ಎಂದು ಯೋಗರಾಜ್ ಆರೋಪಿಸಿದ್ದರು.

ನ್ಯೂಜಿಲೆಂಡ್ ವಿರುದ್ಧ ಧೋನಿ ಬೇಕೆಂದೇ ರನೌಟ್ ಆದರು. ಅವರು ಕ್ರೀಸ್ ಗಿಂತ ಕೆಲವೇ ಇಂಚು ದೂರದಲ್ಲಿದ್ದರು. ಇದು ಉದ್ದೇಶಪೂರ್ವಕವಾಗಿಯೇ ಮಾಡಿದ ಕೃತ್ಯ. ಇಷ್ಟು ವರ್ಷ ಕ್ರಿಕೆಟ್ ಆಡಿದ ಮೇಲೆ ಅವರಿಗೆ ಯಾವ ಸಂದರ್ಭದಲ್ಲಿ ಹೇಗೆ ಆಡಬೇಕು ಎಂದು ಗೊತ್ತಿಲ್ಲವೇ? ಎಂದು ಸಂದರ್ಶನವೊಂದರಲ್ಲಿ ಯೋಗರಾಜ್ ಆರೋಪಗಳ ಸುರಿಮಳೆಗೈದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ: ರವಿಶಾಸ್ತ್ರಿಗೆ ಮಾತ್ರ ಸ್ಪೆಷಲ್ ಕೋಟಾ!