Select Your Language

Notifications

webdunia
webdunia
webdunia
webdunia

ನಾವು ಈಗಲೂ ಧೋನಿ ಹೇಳಿದ್ದನ್ನೇ ಕೇಳೋದು ಎಂದ ಯಜುವೇಂದ್ರ ಚಾಹಲ್

ನಾವು ಈಗಲೂ ಧೋನಿ ಹೇಳಿದ್ದನ್ನೇ ಕೇಳೋದು ಎಂದ ಯಜುವೇಂದ್ರ ಚಾಹಲ್
ಮುಂಬೈ , ಬುಧವಾರ, 22 ಮೇ 2019 (08:24 IST)
ಮುಂಬೈ: ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿಯೇ ಇರಬಹುದು.  ಆದರೆ ನಾಯಕನ ನಾಯಕ ಧೋನಿ ಎಂಬುದನ್ನು ಸ್ವತಃ ಕೊಹ್ಲಿಯೇ ಒಪ್ಪಿಕೊಂಡಿದ್ದಾರೆ.


ಇದೀಗ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡಾ ಅದೇ ಮಾತನ್ನು ಹೇಳಿದ್ದಾರೆ. ನಾಯಕನ ಸ್ಥಾನದಿಂದ ಕೆಳಗಿಳಿದ ಮೇಲೂ ಟೀಂ ಇಂಡಿಯಾದಲ್ಲಿ ಧೋನಿ ಸಲಹೆಯನ್ನು ಎಲ್ಲರೂ ಪಾಲಿಸುತ್ತಾರೆ. ಧೋನಿ ಕೂಡ ತಕ್ಕ ಸಮಯದಲ್ಲಿ ತಂಡಕ್ಕೆ ಬೇಕಾದಂತಹ ಸಲಹೆ ಕೊಡುತ್ತಿರುತ್ತಾರೆ. ಹೀಗಾಗಿಯೇ ಧೋನಿಯೆಂದರೆ ಎಲ್ಲರಿಗೂ ಗೌರವವಿದೆ.

ಇದೀಗ ಈ ಬಗ್ಗೆ ಮಾತನಾಡಿರುವ ಯಜುವೇಂದ್ರ ಚಾಹಲ್ ‘ತಂಡದಲ್ಲಿ ಏನೇ ಆಗಬೇಕಿದ್ದರೂ ಧೋನಿ ಅಭಿಪ್ರಾಯ ಬೇಕು. ನಾವು ತಪ್ಪು ಮಾಡಿದಾಗ ಅವರು ತಿದ್ದುತ್ತಾರೆ. ನಾವು ಈಗಲೂ ಅವರ ಮಾತು ಪಾಲಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಹಿಟ್ ಮ್ಯಾನ್ ಹೆಸರು ಬಂದಿದ್ದು ಹೇಗೆ ಗೊತ್ತಾ?