Publish Date: Fri, 18 Oct 2019 (09:12 IST)
Updated Date: Fri, 18 Oct 2019 (09:13 IST)
ಮುಂಬೈ: ಬಿಸಿಸಿಐನ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ‘ದಾದ’ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಇಲ್ಲಿಯೂ ತನ್ನ ದಾದಾಗಿರಿ ಕಾರ್ಯಕ್ರಮ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾ ನಾಯಕರಾಗಿದ್ದಾಗ ಆಕ್ರಮಣಕಾರಿ ವರ್ತನೆ, ಕಠಿಣ ನಿರ್ಧಾರಗಳಿಂದಾಗಿ ದಾದ ಎಂದೇ ಕರೆಯಿಸಿಕೊಳ್ಳುತ್ತಿದ್ದ ಗಂಗೂಲಿ ದಾದಾಗಿರಿ ಎನ್ನುವ ಟಿವಿ ಶೋ ನಡೆಸಿಕೊಡುತ್ತಾರೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಬಳಿಕ ಈ ಕಾರ್ಯಕ್ರಮದಿಂದ ದೂರವುಳಿಯುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
‘ದಾದಾಗಿರಿ ಶೋ, ಜಾಹೀರಾತು ಒಪ್ಪಂದಗಳು ಮುಂದುವರಯಲಿವೆ. ಅದರ ಹೊರತಾಗಿ ಐಪಿಎಲ್ ಹುದ್ದೆಗಳು, ಇತರ ಕ್ರಿಕೆಟ್ ಕಾಲಂ ಬರವಣಿಗೆ, ಸಂದರ್ಶನಗಳು ಎಲ್ಲವೂ ನಿಲ್ಲಿಸುತ್ತೇನೆ’ ಎಂದು ಗಂಗೂಲಿ ಹೇಳಿದ್ದಾರೆ.