ನೀವೇನು ಎಂಎಸ್ ಧೋನಿಯೇ?! ದಿನೇಶ್ ಕಾರ್ತಿಕ್ ಗೆ ಆಕ್ರೋಶದ ಪ್ರಶ್ನೆ

Webdunia
ಮಂಗಳವಾರ, 12 ಫೆಬ್ರವರಿ 2019 (09:40 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ20 ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಕೃನಾಲ್ ಪಾಂಡ್ಯಗೆ ಬ್ಯಾಟಿಂಗ್ ಅವಕಾಶ ನಿರಾಕರಿಸಿ ಒಂದರ್ಥದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ದಿನೇಶ್ ಕಾರ್ತಿಕ್ ವಿರುದ್ಧ ಅಭಿಮಾನಿಗಳು ಸಿಟ್ಟಾಗಿದ್ದಾರೆ.


ಅಂತಿಮ ಓವರ್ ನ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಗೆ ಅವಕಾಶವಿದ್ದರೂ ತಮ್ಮ ಬಳಿಯೇ ಬ್ಯಾಟಿಂಗ್ ಉಳಿಸಿಕೊಳ್ಳಲು ಕಾರ್ತಿಕ್ ರನ್ ಗಾಗಿ ಓಡಲಿಲ್ಲ. ಆದರೆ ಕಾರ್ತಿಕ್ ಗೆ ಕೊನೆಗೆ ಪಂದ್ಯ ಗೆಲ್ಲಿಸಲಾಗಲೂ ಇಲ್ಲ. ಟೀಂ ಇಂಡಿಯಾ ಕೇವಲ 4 ರನ್ ಗಳಿಂದ ಪಂದ್ಯ ಸೋತಿದ್ದಲ್ಲದೆ ಸರಣಿಯನ್ನೂ ಕಳೆದುಕೊಂಡಿತು.

ಕಾರ್ತಿಕ್ ಮಾಡಿದ ತಪ್ಪಿಗೆ ಇದೀಗ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಟ್ವಿಟರ್ ನಲ್ಲಿ ಕಾರ್ತಿಕ್ ಗೆ ಅಭಿಮಾನಿಯೊಬ್ಬ ನೀವೇನು ಎಂಎಸ್ ಧೋನಿ ಎಂದುಕೊಂಡಿದ್ದೀರಾ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇನ್ನು ಮುಂದೆ ಕಾರ್ತಿಕ್ ಗೆ ಟೀಂ ಇಂಡಿಯಾ ಪರ ಆಡಲು ಅವಕಾಶವೇ ಕೊಡಬೇಡಿ ಎಂದು ಸಿಟ್ಟು ಹೊರಹಾಕಿದ್ದಾರೆ. ಹಿಂದೊಮ್ಮೆ ಇಂತಹದ್ದೇ ಪರಿಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಕ್ಕೆ ಶ್ರೀಲಂಕಾ ವಿರುದ್ಧ ರೋಚಕ ಜಯ ತಂದುಕೊಟ್ಟಿದ್ದರು. ಬಹುಶಃ ಅಂದಿನ ಮ್ಯಾಜಿಕ್ ಮತ್ತೆ ಮಾಡಲು ಹೊರಟಿದ್ದರೇನೋ. ಆದರೆ ಈ ಬಾರಿ ಅವರಿಗೆಅದೃಷ್ಟ ಕೈ ಕೊಟ್ಟಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ಕೆಕೆಆರ್‌: ಪ್ಲೇ ಆಫ್‌ನತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS KKR, ಇನ್ನೂ ಶುರುವಾಗದ ಪಂದ್ಯಾಟ, ಕಾರಣ ಇಲ್ಲಿದೆ

RCB vs MI: ನೋವಿನಲ್ಲೂ ಗೆದ್ದು ಬೀಗಿದ ಕ್ರುನಾಲ್‌ ಪಾಂಡ್ಯ, ಗಾಯದ ಫೋಟೋ ಹಂಚಿಕೊಂಡ ಆಲ್‌ರೌಂಡರ್‌

ಸೂರ್ಯಕುಮಾರ್ ಯಾದವ್ ಮನೆಗೆ ಮಹಾಲಕ್ಷ್ಮಿ ಯಆಗಮನ, ಜರ್ನಲಿಸ್ಟ್ ಕಂಡೊಡನೆ ಸಿಹಿ ತಿನಿಸು ನೀಡಿದ ಸ್ಟಾರ್ ಬ್ಯಾಟರ್‌

ಅಂಪೈರ್ ಜೊತೆ ವಾಗ್ವಾದ ನಡೆಸಿ ಸಂಕಷ್ಟಕ್ಕೆ ಸಿಲುಕಿದ ಆರ್‌ಸಿಬಿ ಮುಖ್ಯ ಕೋಚ್‌ ಆ್ಯಂಡಿ ಫ್ಲವರ್

ಮುಂದಿನ ಸುದ್ದಿ
Show comments