Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಚ್ಯಾರಿಟಿಗೂ ದೇಣಿಗೆ ನೀಡಿದ್ದರಂತೆ ಶಾಹಿದ್ ಅಫ್ರಿದಿ

ಯುವರಾಜ್ ಸಿಂಗ್ ಚ್ಯಾರಿಟಿಗೂ ದೇಣಿಗೆ ನೀಡಿದ್ದರಂತೆ ಶಾಹಿದ್ ಅಫ್ರಿದಿ
ಮುಂಬೈ , ಮಂಗಳವಾರ, 14 ಏಪ್ರಿಲ್ 2020 (09:59 IST)
ಮುಂಬೈ: ಕೊರೋನಾ ವಿರುದ್ಧ ಹೋರಾಡಲು ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ ಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಟೀಕೆಗೊಳಗಾಗಿದ್ದು ನೆನಪಿರಬಹುದು.


ಈ ಬಗ್ಗೆ ಇದೀಗ ಸ್ವತಃ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದಾರೆ. ಹಿಂದೆ ನಾನು ಯುವರಾಜ್ ಸಿಂಗ್ ರ ಕೆನಡಾದಲ್ಲಿರುವ ಚ್ಯಾರಿಟಿಗೂ 10 ಸಾವಿರ ಡಾಲರ್ ದೇಣಿಗೆ ನೀಡಿದ್ದೆ. ಆಗ ಪಾಕಿಸ್ತಾನಿಯರು ಯಾರೂ ನನ್ನ ವಿರೋಧಿಸಲಿಲ್ಲ ಎಂದಿದ್ದಾರೆ.

ಯುವರಾಜ್ ಭಾರತೀಯ ಕ್ರಿಕೆಟಿಗ. ನೀವು ಭಾರತಕ್ಕೆ ಯಾಕೆ ಬೆಂಬಲಿಸುತ್ತಿದ್ದೀರಿ ಎಂದು ಆಗ ಯಾರೂ ನನಗೆ ಕೇಳಿರಲಿಲ್ಲ. ಈಗ ಯುವರಾಜ್ ಸಹಾಯ ಮಾಡಿದರೆ ಯಾಕೆ ಈ ರೀತಿಯ ವಿವಾದವಾಗುತ್ತಿದೆ ಎಂದು ಅಫ್ರಿದಿ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಬೇಕು? ಗಂಭೀರ್ ಪ್ರಶ್ನೆ