Select Your Language

Notifications

webdunia
webdunia
webdunia
webdunia

ಧೋನಿಯನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಬೇಕು? ಗಂಭೀರ್ ಪ್ರಶ್ನೆ

ಧೋನಿಯನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಬೇಕು? ಗಂಭೀರ್ ಪ್ರಶ್ನೆ
ನವದೆಹಲಿ , ಸೋಮವಾರ, 13 ಏಪ್ರಿಲ್ 2020 (11:52 IST)
ನವದೆಹಲಿ: ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಧೋನಿಯನ್ನು ಈಗ ಯಾವ ಆಧಾರದ ಮೇಲೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ.


ಧೋನಿ ಮೇಲೆ ಸದಾ ಕಿಡಿ ಕಾರುವ ಗಂಭೀರ್, ಈಗ ಅವರ ಕಮ್ ಬ್ಯಾಕ್ ಬಗ್ಗೆ ಚ್ಯಾಟ್ ಶೋ ಒಂದರಲ್ಲಿ ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿಯೇ ಉತ್ತರಿಸಿದ್ದಾರೆ.

‘ಐಪಿಎಲ್ ಈ ವರ್ಷದ ನಡೆಯದೇ ಇದ್ದರೆ ಧೋನಿಯನ್ನು ಯಾವ ಪ್ರದರ್ಶನದ ಆಧಾರದ ಮೇಲೆ ತಂಡಕ್ಕೆ ಪುನರ್ ಆಯ್ಕೆ ಮಾಡಬೇಕು? ಯಾಕೆಂದರೆ ಅವರು ಕಳೆದ ಒಂದು ವರ್ಷದಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಧೋನಿ ಸ್ಥಾನವನ್ನು ಕೆಎಲ್ ರಾಹುಲ್ ತುಂಬಲಿದ್ದಾರೆ’ ಎಂದು ಗಂಭೀರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಭಜನ್ ಸಿಂಗ್ ಪರ ಪತ್ನಿ ಗೀತಾ ಬ್ಯಾಟಿಂಗ್