Publish Date: Mon, 13 Apr 2020 (11:52 IST)
Updated Date: Mon, 13 Apr 2020 (11:54 IST)
ನವದೆಹಲಿ: ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಧೋನಿಯನ್ನು ಈಗ ಯಾವ ಆಧಾರದ ಮೇಲೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ.
ಧೋನಿ ಮೇಲೆ ಸದಾ ಕಿಡಿ ಕಾರುವ ಗಂಭೀರ್, ಈಗ ಅವರ ಕಮ್ ಬ್ಯಾಕ್ ಬಗ್ಗೆ ಚ್ಯಾಟ್ ಶೋ ಒಂದರಲ್ಲಿ ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿಯೇ ಉತ್ತರಿಸಿದ್ದಾರೆ.
‘ಐಪಿಎಲ್ ಈ ವರ್ಷದ ನಡೆಯದೇ ಇದ್ದರೆ ಧೋನಿಯನ್ನು ಯಾವ ಪ್ರದರ್ಶನದ ಆಧಾರದ ಮೇಲೆ ತಂಡಕ್ಕೆ ಪುನರ್ ಆಯ್ಕೆ ಮಾಡಬೇಕು? ಯಾಕೆಂದರೆ ಅವರು ಕಳೆದ ಒಂದು ವರ್ಷದಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಧೋನಿ ಸ್ಥಾನವನ್ನು ಕೆಎಲ್ ರಾಹುಲ್ ತುಂಬಲಿದ್ದಾರೆ’ ಎಂದು ಗಂಭೀರ್ ಹೇಳಿದ್ದಾರೆ.