Select Your Language

Notifications

webdunia
webdunia
webdunia
webdunia

ಸೆಹ್ವಾಗ್ ಗೆ ಮಂಳೂರಿಗೆ ಬನ್ನಿ ಎಂದು ಅಭಿಮಾನಿಗಳು ಆಹ್ವಾನವಿತ್ತಿದ್ದೇಕೆ ಗೊತ್ತಾ?!

ಸೆಹ್ವಾಗ್ ಗೆ ಮಂಳೂರಿಗೆ ಬನ್ನಿ ಎಂದು ಅಭಿಮಾನಿಗಳು ಆಹ್ವಾನವಿತ್ತಿದ್ದೇಕೆ ಗೊತ್ತಾ?!
ನವದೆಹಲಿ , ಗುರುವಾರ, 22 ಫೆಬ್ರವರಿ 2018 (08:27 IST)
ನವದೆಹಲಿ: ಕಂಬಳ ಎಂಬ ಕರಾವಳಿಯ ಗ್ರಾಮೀಣ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗೆ ಮಂಗಳೂರಿಗರು ಅಭಿನಂದಿಸಿದ್ದಾರೆ.
 

ಅಷ್ಟೇ ಅಲ್ಲ, ತಮ್ಮ ಊರಿಗೆ ಬರುವಂತೆ ಆಹ್ವಾನವನ್ನೂ ನೀಡಿದ್ದಾರೆ. ಸೆಹ್ವಾಗ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕೆಲವರು ಕರಾವಳಿ ಅಭಿಮಾನಿಗಳು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಒಮ್ಮೆ ಮಂಗಳೂರಿಗೆ ಬಂದು ಕಂಬಳ ಕ್ರೀಡೆಯನ್ನು ವೀಕ್ಷಿಸಿ. ಇದು ಇಲ್ಲಿ ಕೇವಲ ಮನರಂಜನೆಯ ವಸ್ತುವಲ್ಲ. ಸಂಪ್ರದಾಯವಾಗಿ ಪೂಜಿಸಲಾಗುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಹಿಂದೊಮ್ಮೆ ಮಂಗಳೂರಿಗೆ ಭೇಟಿ ನೀಡಿದ್ದರು. ಹೊಡೆ ಬಡಿಯ ಆಟಗಾರನಿಗೆ ಇದೀಗ ಮತ್ತೆ ಕರಾವಳಿಗೆ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಅಂತರ್ಜಾಲದಲ್ಲಿ ಭಾರೀ ಸಂಚಲನ ಉಂಟುಮಾಡುತ್ತಿರುವ ವಿರುಷ್ಕಾ ಜೋಡಿ...!!