Webdunia - Bharat's app for daily news and videos

Install App

ಆಟಗಾರರಿಗೆ ಕೊರೋನಾ ಇದ್ದರೂ ಕ್ರಿಕೆಟ್ ನಡೆಯಬೇಕು! ರಾಹುಲ್ ದ್ರಾವಿಡ್ ಸಲಹೆ

Webdunia
ಮಂಗಳವಾರ, 26 ಮೇ 2020 (10:06 IST)
ಮುಂಬೈ: ಆಫ್ರಿಕಾ, ಆಸ್ಟ್ರೇಲಿಯಾದಂತಹ ಕ್ರಿಕೆಟ್ ತಂಡಗಳು ಈಗ ಕ್ವಾರಂಟೈನ್ ಬಳಿಕ ಕ್ರಿಕೆಟ್ ಸರಣಿ ನಡೆಸುವ ಹೊಸ ಯೋಜನೆ ಹಮ್ಮಿಕೊಂಡಿದ್ದಾರೆ. ಆದರೆ ಇಂತಹ ಯೋಜನೆಗಳು ಟೀಂ ಇಂಡಿಯಾಗೆ ಪರಿಣಾಮಕಾರಿಯಾಗದು ಎಂದು ‘ವಾಲ್’ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.


ಯಾವುದೇ ಸರಣಿಗೆ ಮೊದಲು ಆಟಗಾರರಿಗೆ 14 ದಿನದ ಕ್ವಾರಂಟೈನ್, ಪರೀಕ್ಷೆ ನಡೆಸಿ ಬಳಿಕ ಪಂದ್ಯ ನಡೆಸುವ ಯೋಜನೆಯನ್ನು ಕೆಲವು ವಿದೇಶೀ ತಂಡಗಳು ಹಾಕಿಕೊಂಡಿವೆ. ಆದರೆ ಭಾರತ ತಂಡದಲ್ಲಿ ಇದು ಕೆಲಸ ಮಾಡದು. ಯಾಕೆಂದರೆ ಭಾರತಕ್ಕೆ ಬಿಡುವಿಲ್ಲದ ವೇಳಾಪಟ್ಟಿಯಿರುವುದೇ ಇದಕ್ಕೆ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.

ಹೀಗಾಗಿ ಕ್ವಾರಂಟೈನ್ ಬಳಿಕ ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೂ ಪಂದ್ಯ ನಡೆಯುವಂತಹ ವ್ಯವಸ್ಥೆ ನಾವು ಮಾಡಬೇಕು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ‘ಒಂದು ವೇಳೆ ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ, ಪಂದ್ಯಕ್ಕೆ ಎಲ್ಲಾ ತಯಾರು ಮಾಡಿದ ಮೇಲೆ ಎರಡು ದಿನ ಮೊದಲು ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೆ? ಇಷ್ಟೆಲ್ಲಾ ತಯಾರು ಮಾಡಿ, ವೆಚ್ಚ ಮಾಡಿ ಏನು ಪ್ರಯೋಜನವಾಯಿತು? ಹೀಗಾಗಿ ಒಬ್ಬ ಆಟಗಾರನಿಂದಾಗಿ ಪಂದ್ಯ ನಿಲ್ಲದಂತೆ ಮಾಡುವ ವ್ಯವಸ್ಥೆಗೆ ನಾವು ಮುಂದಾಗಬೇಕು’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments