Webdunia - Bharat's app for daily news and videos

Install App

ಆಟಗಾರರಿಗೆ ಕೊರೋನಾ ಇದ್ದರೂ ಕ್ರಿಕೆಟ್ ನಡೆಯಬೇಕು! ರಾಹುಲ್ ದ್ರಾವಿಡ್ ಸಲಹೆ

Webdunia
ಮಂಗಳವಾರ, 26 ಮೇ 2020 (10:06 IST)
ಮುಂಬೈ: ಆಫ್ರಿಕಾ, ಆಸ್ಟ್ರೇಲಿಯಾದಂತಹ ಕ್ರಿಕೆಟ್ ತಂಡಗಳು ಈಗ ಕ್ವಾರಂಟೈನ್ ಬಳಿಕ ಕ್ರಿಕೆಟ್ ಸರಣಿ ನಡೆಸುವ ಹೊಸ ಯೋಜನೆ ಹಮ್ಮಿಕೊಂಡಿದ್ದಾರೆ. ಆದರೆ ಇಂತಹ ಯೋಜನೆಗಳು ಟೀಂ ಇಂಡಿಯಾಗೆ ಪರಿಣಾಮಕಾರಿಯಾಗದು ಎಂದು ‘ವಾಲ್’ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.


ಯಾವುದೇ ಸರಣಿಗೆ ಮೊದಲು ಆಟಗಾರರಿಗೆ 14 ದಿನದ ಕ್ವಾರಂಟೈನ್, ಪರೀಕ್ಷೆ ನಡೆಸಿ ಬಳಿಕ ಪಂದ್ಯ ನಡೆಸುವ ಯೋಜನೆಯನ್ನು ಕೆಲವು ವಿದೇಶೀ ತಂಡಗಳು ಹಾಕಿಕೊಂಡಿವೆ. ಆದರೆ ಭಾರತ ತಂಡದಲ್ಲಿ ಇದು ಕೆಲಸ ಮಾಡದು. ಯಾಕೆಂದರೆ ಭಾರತಕ್ಕೆ ಬಿಡುವಿಲ್ಲದ ವೇಳಾಪಟ್ಟಿಯಿರುವುದೇ ಇದಕ್ಕೆ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.

ಹೀಗಾಗಿ ಕ್ವಾರಂಟೈನ್ ಬಳಿಕ ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೂ ಪಂದ್ಯ ನಡೆಯುವಂತಹ ವ್ಯವಸ್ಥೆ ನಾವು ಮಾಡಬೇಕು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ‘ಒಂದು ವೇಳೆ ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ, ಪಂದ್ಯಕ್ಕೆ ಎಲ್ಲಾ ತಯಾರು ಮಾಡಿದ ಮೇಲೆ ಎರಡು ದಿನ ಮೊದಲು ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೆ? ಇಷ್ಟೆಲ್ಲಾ ತಯಾರು ಮಾಡಿ, ವೆಚ್ಚ ಮಾಡಿ ಏನು ಪ್ರಯೋಜನವಾಯಿತು? ಹೀಗಾಗಿ ಒಬ್ಬ ಆಟಗಾರನಿಂದಾಗಿ ಪಂದ್ಯ ನಿಲ್ಲದಂತೆ ಮಾಡುವ ವ್ಯವಸ್ಥೆಗೆ ನಾವು ಮುಂದಾಗಬೇಕು’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments