Publish Date: Thu, 07 Jan 2021 (16:50 IST)
Updated Date: Thu, 07 Jan 2021 (16:52 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊದಲ ದಿನ ಪಂದ್ಯಾರಂಭಕ್ಕೂ ಮೊದಲು ರಾಷ್ಟ್ರಗೀತೆ ಹಾಡುವಾಗ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾದ ಘಟನೆ ನಡೆದಿತ್ತು. ದಿನದಾಟದ ಬಳಿಕ ಸಿರಾಜ್ ಇದಕ್ಕೆ ಕಾರಣ ತಿಳಿಸಿದ್ದಾರೆ.
ಮೊದಲ ದಿನದಾಟದ ನಂತರ ಮಾತನಾಡಿರುವ ಸಿರಾಜ್ ನನಗೆ ತಂದೆಯ ನೆನಪಾಗಿ ಕಣ್ಣೀರು ಬಂತು. ನನ್ನ ತಂದೆ ನಾನು ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಬಯಸಿದ್ದರು. ಬಹುಶಃ ಅವರು ಈಗ ಜೀವಂತವಾಗಿದ್ದಿದ್ದರೆ ನಾನು ಆಡುವುದನ್ನು ನೋಡಿ ಖುಷಿಪಡುತ್ತಿದ್ದರು. ಅವರನ್ನು ನೆನೆದು ಕಣ್ಣೀರು ಬಂತು ಎಂದು ಸಿರಾಜ್ ಹೇಳಿದ್ದಾರೆ.