Select Your Language

Notifications

webdunia
webdunia
webdunia
webdunia

ರಾಷ್ಟ್ರಗೀತೆ ಹಾಡುವಾಗ ಕಣ್ಣೀರು ಹಾಕಿದ ಕಾರಣ ಹೇಳಿದ ಮೊಹಮ್ಮದ್ ಸಿರಾಜ್

ರಾಷ್ಟ್ರಗೀತೆ ಹಾಡುವಾಗ ಕಣ್ಣೀರು ಹಾಕಿದ ಕಾರಣ ಹೇಳಿದ ಮೊಹಮ್ಮದ್ ಸಿರಾಜ್
ಸಿಡ್ನಿ , ಗುರುವಾರ, 7 ಜನವರಿ 2021 (16:50 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊದಲ ದಿನ ಪಂದ್ಯಾರಂಭಕ್ಕೂ ಮೊದಲು ರಾಷ್ಟ್ರಗೀತೆ ಹಾಡುವಾಗ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾದ ಘಟನೆ ನಡೆದಿತ್ತು. ದಿನದಾಟದ ಬಳಿಕ ಸಿರಾಜ್ ಇದಕ್ಕೆ ಕಾರಣ ತಿಳಿಸಿದ್ದಾರೆ.


ಮೊದಲ ದಿನದಾಟದ ನಂತರ ಮಾತನಾಡಿರುವ ಸಿರಾಜ್ ‘ನನಗೆ ತಂದೆಯ ನೆನಪಾಗಿ ಕಣ್ಣೀರು ಬಂತು. ನನ್ನ ತಂದೆ ನಾನು ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಬಯಸಿದ್ದರು. ಬಹುಶಃ ಅವರು ಈಗ ಜೀವಂತವಾಗಿದ್ದಿದ್ದರೆ ನಾನು ಆಡುವುದನ್ನು ನೋಡಿ ಖುಷಿಪಡುತ್ತಿದ್ದರು. ಅವರನ್ನು ನೆನೆದು ಕಣ್ಣೀರು ಬಂತು’ ಎಂದು ಸಿರಾಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರಿಗರಿಂದ ಟ್ರೋಲ್ ಗೊಳಗಾದ ರಿಷಬ್ ಪಂತ್