Webdunia - Bharat's app for daily news and videos

Install App

ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?

Webdunia
ಸೋಮವಾರ, 18 ಸೆಪ್ಟಂಬರ್ 2017 (08:35 IST)
ಚೆನ್ನೈ: ಪ್ರಯೋಗ ಮಾಡುವ ಭರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆಯೇ? ನಿನ್ನೆಯ ಪಂದ್ಯ ನೋಡಿದರೆ ಮತ್ತೆ ಅದು ಸರಿ ಎನಿಸುತ್ತದೆ.

 
ಕೆಎಲ್ ರಾಹುಲ್ ರನ್ನು ಹೊರಗಿಟ್ಟು ಅಜಿಂಕ್ಯಾ ರೆಹಾನೆಗೆ ಆರಂಭಿಕ ಸ್ಥಾನ ನೀಡಿದ್ದು ಸರಿಯೇ ಎನ್ನುವ ಚರ್ಚೆ ಶುರುವಾಗಿದೆ. ಅತ್ತ ಮನೀಶ್ ಪಾಂಡೆ ಕೂಡಾ ಉತ್ತಮ ಆಟವಾಡಲಿಲ್ಲ. ಹಾಗಾಗಿ ಕೊಹ್ಲಿ ಯೋಜನೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕೆಎಲ್ ರಾಹುಲ್ ಆರಂಭಿಕರಾಗಿ ಉತ್ತಮ ಸಾಧನೆ ಮಾಡಿದವರು. ಅವರನ್ನು ಪ್ರಯೋಗದ ಹೆಸರಲ್ಲಿ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ವಿಫಲರಾದಾಗ ಆಡುವ ಬಳಗದಿಂದಲೇ ಹೊರಗಿಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ರೆಹಾನೆ ಬದಲಿಗೆ ರಾಹುಲ್ ರನ್ನು ಆರಂಭಿಕ ಸ್ಥಾನದಲ್ಲಿ ಆಡಿಸಿದ್ದರೆ ಭಾರತಕ್ಕೆ ಉತ್ತಮ ಆರಂಭ ದೊರಕುತ್ತಿತ್ತು. ಆದರೆ ಕೊಹ್ಲಿ ರಾಹುಲ್ ರಂತಹ ಸ್ಪೆಷಲಿಸ್ಟ್ ಆರಂಭಿಕರಿದ್ದೂ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇನ್ನೊಬ್ಬರನ್ನು ಕೂರಿಸಲು ಸರ್ಕಸ್ ಮಾಡುತ್ತಿರುವುದೇಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಯೋಗದ ಹೆಸರಿನಲ್ಲಿ ರಾಹುಲ್ ಭವಿಷ್ಯ ಮಂಕಾಗದಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ

Virat Kohli: ಟ್ರೋಫಿ ಗೆದ್ದಾಗ ಕೊಹ್ಲಿಗೆ ಕಣ್ಣೀರು ಬಂತು, ಅಭಿಮಾನಿ ಸತ್ತಾಗ ಬರಲಿಲ್ಲ ಯಾಕೆ

Gautam Gambhir: ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಗೌತಮ್ ಗಂಭೀರ್ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments