Webdunia - Bharat's app for daily news and videos

Install App

ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?

Webdunia
ಸೋಮವಾರ, 18 ಸೆಪ್ಟಂಬರ್ 2017 (08:35 IST)
ಚೆನ್ನೈ: ಪ್ರಯೋಗ ಮಾಡುವ ಭರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆಯೇ? ನಿನ್ನೆಯ ಪಂದ್ಯ ನೋಡಿದರೆ ಮತ್ತೆ ಅದು ಸರಿ ಎನಿಸುತ್ತದೆ.

 
ಕೆಎಲ್ ರಾಹುಲ್ ರನ್ನು ಹೊರಗಿಟ್ಟು ಅಜಿಂಕ್ಯಾ ರೆಹಾನೆಗೆ ಆರಂಭಿಕ ಸ್ಥಾನ ನೀಡಿದ್ದು ಸರಿಯೇ ಎನ್ನುವ ಚರ್ಚೆ ಶುರುವಾಗಿದೆ. ಅತ್ತ ಮನೀಶ್ ಪಾಂಡೆ ಕೂಡಾ ಉತ್ತಮ ಆಟವಾಡಲಿಲ್ಲ. ಹಾಗಾಗಿ ಕೊಹ್ಲಿ ಯೋಜನೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕೆಎಲ್ ರಾಹುಲ್ ಆರಂಭಿಕರಾಗಿ ಉತ್ತಮ ಸಾಧನೆ ಮಾಡಿದವರು. ಅವರನ್ನು ಪ್ರಯೋಗದ ಹೆಸರಲ್ಲಿ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ವಿಫಲರಾದಾಗ ಆಡುವ ಬಳಗದಿಂದಲೇ ಹೊರಗಿಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ರೆಹಾನೆ ಬದಲಿಗೆ ರಾಹುಲ್ ರನ್ನು ಆರಂಭಿಕ ಸ್ಥಾನದಲ್ಲಿ ಆಡಿಸಿದ್ದರೆ ಭಾರತಕ್ಕೆ ಉತ್ತಮ ಆರಂಭ ದೊರಕುತ್ತಿತ್ತು. ಆದರೆ ಕೊಹ್ಲಿ ರಾಹುಲ್ ರಂತಹ ಸ್ಪೆಷಲಿಸ್ಟ್ ಆರಂಭಿಕರಿದ್ದೂ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇನ್ನೊಬ್ಬರನ್ನು ಕೂರಿಸಲು ಸರ್ಕಸ್ ಮಾಡುತ್ತಿರುವುದೇಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಯೋಗದ ಹೆಸರಿನಲ್ಲಿ ರಾಹುಲ್ ಭವಿಷ್ಯ ಮಂಕಾಗದಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಟೀಂ ಇಂಡಿಯಾ, ಅಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ಲೈವ್ ಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಫೈನಲ್ ಗೆ ಭಾರತ ತಂಡ: ಫೈನಲ್ ಯಾವಾಗ, ಎಷ್ಟನೇ ಬಾರಿ ಫೈನಲ್ ಪ್ರವೇಶಿಸುತ್ತಿದೆ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಸೆಮಿಫೈನಲ್ ನಲ್ಲಿ ಭಾರತ ವರ್ಸಸ್ ಬಾಂಗ್ಲಾ: ಲೈವ್ ಇಲ್ಲಿ ವೀಕ್ಷಿಸಿ

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಾಳೆ ಬಾಂಗ್ಲಾದೇಶ ಸವಾಲು

Australia one-day series: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸೇರ್ಪಡೆ

ಮುಂದಿನ ಸುದ್ದಿ
Show comments