Publish Date: Fri, 04 Dec 2020 (09:43 IST)
Updated Date: Fri, 04 Dec 2020 (09:45 IST)
ಸಿಡ್ನಿ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಇಂದಿನಿಂದ ಹೊಸ ಪರ್ವ ಶುರುವಾಗಲಿದೆ. ಇದುವರೆಗೆ ತಂಡದಲ್ಲಿ ಬ್ಯಾಟ್ಸ್ ಮನ್ ಆಗಿ, ವಿಕೆಟ್ ಕೀಪರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಹುಲ್ ಗೆ ಇಂದಿನಿಂದ ಮತ್ತೊಂದು ಹೆಚ್ಚುವರಿ ಹೊಣೆ ಹೆಗಲಿಗೇರಲಿದೆ.
ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಕೆಎಲ್ ರಾಹುಲ್ ಉಪನಾಯಕನಾಗಿ ಬಡ್ತಿ ಪಡೆದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಲು ಪ್ರಥಮ ಹೆಜ್ಜೆಯಾಗಿರಬಹುದು. ಹಾಗಾಗಿ ಈ ಸರಣಿ ರಾಹುಲ್ ಪಾಲಿಗೆ ಮಹತ್ವದ್ದಾಗಿದೆ.