Publish Date: Tue, 07 Apr 2020 (09:27 IST)
Updated Date: Tue, 07 Apr 2020 (09:28 IST)
ಮುಂಬೈ: ಕೊರೋನಾವೈರಸ್ ಹರಡುವಿಕೆ ತಡೆಯಲು ಈ ಬಾರಿ ಐಪಿಎಲ್ ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆದರೆ ಕೆಲವು ಆಟಗಾರರಿಗೆ ಇದರಿಂದ ಬದುಕೇ ಅತಂತ್ರವಾಗಲಿದೆ.
ಐಪಿಎಲ್ ನ್ನೇ ತಮ್ಮ ಜೀವನಾಧಾರ ಎಂದು ನಂಬಿಕೊಂಡಿದ್ದ ಯುವ ಕ್ರಿಕೆಟಿಗರಿಗೆ ಈಗ ಕೂಟ ರದ್ದುಗೊಂಡರೆ ಬದುಕು ಅತಂತ್ರವಾಗಲಿದೆ. ಹೀಗಾಗಿ ಕಿರು ಅವಧಿಯದ್ದಾದರೂ ಸರಿಯೇ ಐಪಿಎಲ್ ನಡೆಸಿ ಎಂದು ಕೆಲವು ಕ್ರಿಕೆಟಿಗರು ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದ್ದಾರಂತೆ.
ಒಂದು ಅವಧಿಯ ಐಪಿಎಲ್ ಆಡಿದರೆ ಲಕ್ಷ ಸಂಪಾದನೆ ಮಾಡುವ ಕ್ರಿಕೆಟಿಗರು ಆ ಮೂಲಕ ತಮ್ಮ ಜೀವನ ಸೆಟ್ಲ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಕೂಟ ರದ್ದಾದರೆ ನಷ್ಟವಾಗುವುದು ಈ ಕ್ರಿಕೆಟಿಗರಿಗೆ.