Select Your Language

Notifications

webdunia
webdunia
webdunia
webdunia

ಭುವನೇಶ್ವರ ಕುಮಾರ್ ಗೆ ಧೋನಿ ಹೇಳಿದ್ದ ಆ ಸೀಕ್ರೆಟ್ ಏನು?

ಭುವನೇಶ್ವರ ಕುಮಾರ್ ಗೆ ಧೋನಿ ಹೇಳಿದ್ದ ಆ ಸೀಕ್ರೆಟ್ ಏನು?
ಪಲ್ಲಿಕೆಲೆ , ಶನಿವಾರ, 26 ಆಗಸ್ಟ್ 2017 (08:32 IST)
ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಸೋಲಲಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಭುವನೇಶ್ವರ್ ಕುಮಾರ್ ಗೆ ಆ ರೀತಿ ಆಡಲು ಸ್ಪೂರ್ತಿ ತುಂಬಿದ್ದು ಇನ್ನೊಂದು ತುದಿಯಲ್ಲಿದ್ದ ಧೋನಿ.

 
ಅಷ್ಟಕ್ಕೂ ಭುವಿಗೆ ಧೋನಿ ಏನು ಹೇಳಿದ್ದರು ಗೊತ್ತಾ? ಅದನ್ನು ಸ್ವತಃ ಭುವಿಯೇ ಬಿಚ್ಚಿಟ್ಟಿದ್ದಾರೆ. ಹೇಳಿ ಕೇಳಿ ಭುವನೇಶ್ವರ್ ಕುಮಾರ್ ಪಕ್ಕಾ ಬೌಲರ್. ಅಂತಹವರು ಅಷ್ಟು ದೊಡ್ಡ ಇನಿಂಗ್ಸ್ ಆಡಲು ಧೋನಿ ಮಾತುಗಳೇ ಕಾರಣವಾಯಿತಂತೆ.

‘ನಾನು ಬ್ಯಾಟ್ ಮಾಡಲಿಳಿದಾಗ ಎಂಎಸ್ ನನ್ನ ಬಳಿ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವಂತೆ ಸ್ವಾಭಾವಿಕ ಆಟವಾಡಲು ಹೇಳಿದರು. ಯಾವುದೇ ಒತ್ತಡ ಮೈಮೇಲೆ ಎಳೆದುಕೊಳ್ಳಬೇಡ. ಬೇಕಾದಷ್ಟು ಓವರ್ ಇದೆ. ಹಾಗಾಗಿ ಚೇಸ್ ಮಾಡಲು ಕಷ್ಟವಾಗದು ಎಂದು ಅರ್ಥ ಮಾಡಿಸಿದರು’ ಎಂದು ಭುವನೇಶ್ವರ ಕುಮಾರ್ ಹೇಳಿದ್ದಾರೆ. ಧೋನಿಯ ಪ್ರೇರಣೆಯಿಂದ ಭುವಿ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು.

ಇದನ್ನೂ ಓದಿ.. ರೋಡ್ ನಿರ್ಮಿಸಿದ್ರೆ ಹುಷಾರ್ ಎಂದ ಚೀನಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಿಂದ ಮತ್ತೊಂದು ಲಂಕಾ ವಿಜಯ