Publish Date: Sat, 26 Aug 2017 (08:32 IST)
Updated Date: Sat, 26 Aug 2017 (08:41 IST)
ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಸೋಲಲಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಭುವನೇಶ್ವರ್ ಕುಮಾರ್ ಗೆ ಆ ರೀತಿ ಆಡಲು ಸ್ಪೂರ್ತಿ ತುಂಬಿದ್ದು ಇನ್ನೊಂದು ತುದಿಯಲ್ಲಿದ್ದ ಧೋನಿ.
ಅಷ್ಟಕ್ಕೂ ಭುವಿಗೆ ಧೋನಿ ಏನು ಹೇಳಿದ್ದರು ಗೊತ್ತಾ? ಅದನ್ನು ಸ್ವತಃ ಭುವಿಯೇ ಬಿಚ್ಚಿಟ್ಟಿದ್ದಾರೆ. ಹೇಳಿ ಕೇಳಿ ಭುವನೇಶ್ವರ್ ಕುಮಾರ್ ಪಕ್ಕಾ ಬೌಲರ್. ಅಂತಹವರು ಅಷ್ಟು ದೊಡ್ಡ ಇನಿಂಗ್ಸ್ ಆಡಲು ಧೋನಿ ಮಾತುಗಳೇ ಕಾರಣವಾಯಿತಂತೆ.
‘ನಾನು ಬ್ಯಾಟ್ ಮಾಡಲಿಳಿದಾಗ ಎಂಎಸ್ ನನ್ನ ಬಳಿ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವಂತೆ ಸ್ವಾಭಾವಿಕ ಆಟವಾಡಲು ಹೇಳಿದರು. ಯಾವುದೇ ಒತ್ತಡ ಮೈಮೇಲೆ ಎಳೆದುಕೊಳ್ಳಬೇಡ. ಬೇಕಾದಷ್ಟು ಓವರ್ ಇದೆ. ಹಾಗಾಗಿ ಚೇಸ್ ಮಾಡಲು ಕಷ್ಟವಾಗದು ಎಂದು ಅರ್ಥ ಮಾಡಿಸಿದರು’ ಎಂದು ಭುವನೇಶ್ವರ ಕುಮಾರ್ ಹೇಳಿದ್ದಾರೆ. ಧೋನಿಯ ಪ್ರೇರಣೆಯಿಂದ ಭುವಿ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು.