Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕೊರೋನಾ ಸೋಂಕಿಗೆ ಬಲಿ

ಕ್ರಿಕೆಟ್ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕೊರೋನಾ ಸೋಂಕಿಗೆ ಬಲಿ
ಬೆಂಗಳೂರು , ಭಾನುವಾರ, 25 ಏಪ್ರಿಲ್ 2021 (10:03 IST)
ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಚೆಲುವಾಂಬ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

 
ಕಡೂರಿನ ಆಸ್ಪತ್ರೆಯಲ್ಲಿ ಚೆಲುವಾಂಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವೇದಾ ಕುಟಂಬದಲ್ಲಿ ಇನ್ನೂ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ. ವೇದಾ ಅಣ್ಣ, ಅತ್ತಿಗೆ, ಅಕ್ಕ ಹಾಗೂ ಅವರ ತಂದೆ ಕೂಡಾ ಸೋಂಕಿತರಾಗಿದ್ದಾರೆ. ಇವರಿಗೆಲ್ಲಾ ಚಿಕಿತ್ಸೆ ಮುಂದುವರಿದಿದೆ.

ಮೃತ ಚೆಲುವಾಂಬ ಅಂತ್ಯ ಸಂಸ್ಕಾರ ಕೊರೋನಾ ನಿಯಮದಂತೆ ನಡೆದಿದೆ. ಇತರ ಸದಸ್ಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸನ್ ರೈಸರ್ಸ್ ಗೆ ಡೆಲ್ಲಿ ಸವಾಲು