Select Your Language

Notifications

webdunia
webdunia
webdunia
webdunia

ಕಡುಬಡತನದಿಂದ ಚೇತನ್ ಸಕಾರಿಯಾಗೆ ಟೀಂ ಇಂಡಿಯಾ ನೀಡಿದ ಅದೃಷ್ಟ

ಕಡುಬಡತನದಿಂದ ಚೇತನ್ ಸಕಾರಿಯಾಗೆ ಟೀಂ ಇಂಡಿಯಾ ನೀಡಿದ ಅದೃಷ್ಟ
ಮುಂಬೈ , ಶನಿವಾರ, 12 ಜೂನ್ 2021 (09:36 IST)
ಮುಂಬೈ: ಚೇತನ್ ಸಕಾರಿಯಾ.. ಈ ಹೆಸರು ಐಪಿಎಲ್ ನಲ್ಲಿ ಕೇಳಿಬರಬಹುದು. ಕಡುಬಡತನದಿಂದ ಕ್ರಿಕೆಟ್ ಗೆ ಬಂದ ಚೇತನ್ ಸಕಾರಿಯಾಗೆ ಈಗ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅದೃಷ್ಟ ಒಲಿದಿದೆ.

 
ಟೆಂಪೋ ಡ್ರೈವರ್ ಮಗ ವೇಗಿ ಚೇತನ್ ಸಕಾರಿಯಾ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ. ಇತ್ತೀಚೆಗಷ್ಟೇ ಕೊರೋನಾದಿಂದಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಸಕಾರಿಯಾ ಬಡತನದ ಹಿನ್ನಲೆಯಿಂದ ಬಂದವರು. ಇದೀಗ ಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.

ತಮ್ಮ ತಂದೆಯ ಚಿಕಿತ್ಸೆಗೂ ಹಣವಿಲ್ಲದೇ ಹೋದಾಗ ಐಪಿಎಲ್ ನಿಂದ ದುಡಿದ ಹಣ ಅವರ ನೆರವಿಗೆ ಬಂದಿತ್ತು. ಆದರೆ ದುರದೃಷ್ಟವಶಾತ್ ಕಷ್ಟಪಟ್ಟು ತನ್ನನ್ನು ಕ್ರಿಕೆಟಿಗನಾಗಿ ಮಾಡಿದ ತಂದೆಯನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಈಗ ಟೀಂ ಇಂಡಿಯಾಗೆ ಆಯ್ಕೆಯಾದ ಖುಷಿಯಲ್ಲಿರುವ ಅವರು, ಈ ದಿನವನ್ನು ನನ್ನ ತಂದೆ ನೋಡಲು ಬಯಸಿದ್ದರು.  ಇಂದು ಅವರನ್ನು ಬಹಳ ಮಿಸ್ ಮಾಡುತ್ತಿದ್ದೇನೆ. ನನ್ನ ದಿವಂಗತ ತಂದೆ ಮತ್ತು ತಾಯಿಗಾಗಿ ನಾನು ಕ್ರಿಕೆಟ್ ಆಡಲು ಬಯಸಿದ್ದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಚಾಂಪಿಯನ್ ನಲ್ಲಿ ಟೀಂ ಇಂಡಿಯಾಕ್ಕೆ ಈಗ ಇದೇ ಆತಂಕ!