Publish Date: Sun, 26 Apr 2020 (09:23 IST)
Updated Date: Sun, 26 Apr 2020 (09:24 IST)
ಮುಂಬೈ: ಕೊರೋನಾ ಹಿನ್ನಲೆಯಲ್ಲಿ ಆಟಗಾರರು ಇನ್ನು ಮುಂದೆ ಚೆಂಡು ಹೊಳಪು ಮೂಡಿಸಲು ಜೊಲ್ಲು ರಸ ಬಳಕೆ ತಡೆಯಲು ಯಾವುದಾದರೂ ರಾಸಾಯನಿಕವನ್ನೇ ಬಳಸುವುದನ್ನು ಕಾನೂನುಬದ್ಧಗೊಳಿಸಲು ಯೋಜನೆ ರೂಪಿಸಿರುವ ಐಸಿಸಿ ಕ್ರಮಕ್ಕೆ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ವಿರೋಧ ವ್ಯಕ್ತಪಡಿಸಿದ್ದಾರೆ.
ಚೆಂಡು ರಿವರ್ಸ್ ಸ್ವಿಂಗ್ ಪಡೆಯಬೇಕಾದರೆ ಒಂದು ಬದಿಗೆ ಜೊಲ್ಲು ಅಥವಾ ಬೆವರಿನಿಂದ ಒರೆಸುವುದು ಅನಿವಾರ್ಯ. ವ್ಯಾಸಲಿನ್ ಕೂಡಾ ಪರ್ಯಾಯವಾಗಿ ಕೆಲಸ ಮಾಡದು.
ವ್ಯಾಸಲಿನ್ ಬಳಕೆ ಮಾಡುವುದರಿಂದ ಚೆಂಡು ಹೊಳಪು ಮೂಡಬಹುದಷ್ಟೇ ಹೊರತು ಸ್ವಿಂಗ್ ಆಗದು. ಇದನ್ನು ಬೇಕಾದರೆ ನೀವು ಪರೀಕ್ಷಿಸಿ ನೋಡಿ ಎಂದು ನೆಹ್ರಾ ಸವಾಲು ಹಾಕಿದ್ದಾರೆ.