Select Your Language

Notifications

webdunia
webdunia
webdunia
webdunia

ಅಪಘಾತ ಎಸಗಿ ಮಹಿಳೆಯ ಸಾವಿಗೆ ಕಾರಣರಾದ ಅಂಜಿಕ್ಯ ರಹಾನೆ ತಂದೆ ಬಂಧನ

ಅಪಘಾತ ಎಸಗಿ ಮಹಿಳೆಯ ಸಾವಿಗೆ ಕಾರಣರಾದ ಅಂಜಿಕ್ಯ ರಹಾನೆ ತಂದೆ ಬಂಧನ
ನವದೆಹಲಿ , ಶುಕ್ರವಾರ, 15 ಡಿಸೆಂಬರ್ 2017 (20:37 IST)
ಕಾರು ಹರಿಸಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಭಾರತೀಯ ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್‌ ಬಾಬುರಾವ್‌ ರಹಾನೆ ಅವರನ್ನು ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ.
 
ಮಧುಕರ್ ಬಾಬುರಾವ್ ರಹಾನೆ ಅವರು ಕುಟುಂಬದವರೊಂದಿಗೆ ಹ್ಯೂಂಡೈ ಐ20 ಕಾರನ್ನು 4ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸುತ್ತಿದ್ದಾಗ ಕಂಗಲ್‌ ಎಂಬ ಪ್ರದೇಶದಲ್ಲಿ ಆಶಾತಾಯಿ ಕಾಂಬ್ಳೆ ಎಂಬ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ತೀವ್ರಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
 
ಅಪಘಾತ ಸಂಭವಿಸಿದ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತ ಎಸಗಿದ ರಹಾನೆ ಅವರ ತಂದೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಬೆನ್ನಲ್ಲೇ ಕೊಹ್ಲಿಗೆ ಬಿಸಿಸಿಐನಿಂದ ಹಣದ ಹೊಳೆ!